ನಗರದ ದೇವಿಕೆರೆ, ಬಸ್ ನಿಲ್ದಾಣ, ಆಟೊರಿಕ್ಷಾ ನಿಲ್ದಾಣ, ಡ್ರೈವರ್ಕಟ್ಟೆ, ಕೆಇಬಿ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ, ಝೂವೃತ್ತ, ಉಣ್ಣೇಮಠಗಲ್ಲಿ, ಸಿಂಪಿಗಲ್ಲಿ, ಮಾರಿಗುಡಿ, ಬಾಪೂಜಿನಗರ, ರಾಯರಪೇಟೆ, ಕೋಟೆಕೆರೆ ವೃತ್ತ, ಟಿಎಸ್ಎಸ್ ರಸ್ತೆ, ಹನುಮಗಿರಿ, ಶಿವಾಜಿಚೌಕ ಮೊದಲಾದ ಕಡೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ನೋಡಲು ಹಳ್ಳಿಗಳಿಂದ ಜನರು ಬರುತ್ತಿದ್ದಾರೆ. ಗಣಪತಿ ಮೂರ್ತಿ ಜೊತೆಗೆ ಇರುವ ಪೌರಾಣಿಕ ದೃಶ್ಯಾವಳಿಗಳು ಜನರನ್ನು ಸೆಳೆಯುತ್ತಿವೆ. ಝೂ ವೃತ್ತದ ಸಾರ್ವಜನಿಕ ಗಣಪತಿ ಈ ವರ್ಷ ಕೂಡ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದ್ದಾನೆ. ದೇವಾಲಯದ ಆಕರ್ಷಕ ಮಾದರಿ ನಿರ್ಮಿಸಲಾಗಿದೆ.