ಗ್ಯಾಸ್ ಟ್ಯಾಂಕರ್ ಖಾಸಗಿ ಕಂಪನಿಯದ್ದಾಗಿದ್ದು, ಚೆನೈನಿಂದ ಗೋವಾಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಚಾಲಕ ತಮಿಳುನಾಡಿದ ಕಲ್ಲಪಳಿಯಂ ನಿವಾಸಿ ಪೊನ್ನಸ್ವಾಮಿ, ಸುಬ್ರಹ್ಮಣ್ಯಂ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ಯಾಸ್ ವಾಹನಗಳಿಗೆ ಅಪಘಾತವಾದಾಗ ಭೇಟಿ ನೀಡುವ ಅಂಕೋಲಾದ ಕ್ಷಿಪ್ರ ಕಾರ್ಯಾಚರಣೆ ಪಡೆ ಭೇಟಿ ನೀಡಿ, ಗ್ಯಾಸ್ ಸೋರಿಕೆ ಇಲ್ಲವೆಂದು ಖಚಿತಪಡಿಸಿತು.