ಬೆಳಗಾವಿಯಲ್ಲಿ ಎಂಇಎಸ್ ಪಕ್ಷದ ತಗಾದೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಎಂಇಎಸ್ ನ ಆಕ್ಷೇಪಗಳಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಅವಿಭಾಜ್ಯ ಅಂಗ. ಮಹಾರಾಷ್ಟ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಅದರ ಪ್ರಚೋದನೆಯಿಂದ ಪುಂಡಾಟ ಮಾಡುತ್ತಿದೆ. ಈ ಹಿಂದೆ ವಿಧಾನಸಭೆಯಲ್ಲಿ ಆ ಪಕ್ಷದ ಐವರು ಶಾಸಕರಿದ್ದರು. ಇವತ್ತು ಒಬ್ಬರೂ ಇಲ್ಲ. ಬೆಳಗಾವಿಯಲ್ಲಿ ಒಬ್ಬರೂ ಶಾಸಕರನ್ನು ಹೊಂದಿರದ ಎಂ.ಇ.ಎಸ್, ಬೆಳಗಾವಿಯು ಮಹಾರಾಷ್ಟ್ರದ್ದು ಎಂದು ಹೇಳುವುದರಲ್ಲಿ ಯಾವ ನ್ಯಾಯವೂ ಇಲ್ಲ' ಎಂದು ಹೇಳಿದರು.