ಅದರ ಅಂಗವಾಗಿ ದೇವಸ್ಥಾನದ ಎದುರುಗಡೆ ಮೊಸರು ಕುಡಿಕೆಯನ್ನು ಒಡೆಯಲಾಯಿತು. ಭಜನಾಧಾರಿಗಳು ದೇವಸ್ಥಾನದ ಎದುರುಗಡೆ ಮಂಡಿ ಊರಿ ಕುಳಿತು, ದೇವರಿಗೆ 108 ನಮನ ಸಲ್ಲಿಸಿದ್ದು ಆಕರ್ಷಕವಾಗಿ ಕಂಡು ಬಂತು. ನಂತರ ಭಕ್ತಾಧಿಗಳು ಊರಿನ ಮುಖ್ಯ ರಸ್ತೆಗಳಲೆಲ್ಲಾ ಭಜನೆ ಮಾಡುತ್ತಾ ಸಂಚರಿಸಿ ಕೃತಾರ್ಥರಾದರು. ಈ ಭಜನಾ ಸಪ್ತಾಹದಲ್ಲಿ ಎಲ್ಲಾ ಜಾತಿಯ ಜನಾಂಗದವರೂ ಪಾಲ್ಗೊಳ್ಳುತ್ತಾರೆ. ಈ ಪದ್ಧತಿ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದ್ದು ಇಂದಿಗೂ ಆಚರಣೆ ಮಾಡುತ್ತಿರುವುದು ಬಹಳ ವಿಶೇಷವಾಗಿದೆ. ಮಹಾಬಲೇಶ್ವರ ದೇವರ ಉತ್ಸವ ಕೋಟಿತೀರ್ಥ ಕಟ್ಟೆಯಲ್ಲಿರುವ ಗೋಪಾಲಕೃಷ್ಣ ದೇವಸ್ಥಾನ ತಲುಪಿ ಬಂತು. ಈ ವೇಳೆ ದಾರಿಯುದ್ದಕ್ಕೂ ಮೊಸರುಕುಡಿಕೆ ಒಡೆಯಲಾಯಿತು.