‘ಏಪ್ರಿಲ್ ಕೊನೆಯಲ್ಲಿ ಬರುವ ಭರಣಿ ಮಳೆಗೆ ರೈತರು ಗದ್ದೆ ಹದಗೊಳಿಸಿ, ಬಿತ್ತನೆ ಆರಂಭಿಸುತ್ತಿದ್ದರು. ಈ ಬಾರಿ, ರೈತರು ಒಂದೂವರೆ ತಿಂಗಳು ತಡವಾಗಿ ಈಗ ಗದ್ದೆಗಿಳಿದಿದ್ದಾರೆ. ಮಳೆ ತಡವಾದ ಕಾರಣ ಈ ಬಾರಿ ಬೇಗ ಬೆಳೆ ಬರುವ ಗುಡ್ಡ ಭತ್ತ, ಹಾಲ್ದಡಗ್ಯಾ, ಜಯಾ, 1010 ಜಾತಿಯ ಭತ್ತವನ್ನು ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ. ಈ ತಳಿಗಳು ನಾಲ್ಕು ತಿಂಗಳಿಗೆ ಕೊಯ್ಲಿಗೆ ಬರುತ್ತವೆ’ ಎನ್ನುತ್ತಾರೆ ರೈತ ಆನಂದ ಗೌಡ.