ಕಾರವಾರ: ಸಕಲೇಶಪುರ–ಸುಬ್ರಹ್ಮಣ್ಯ ರೋಡ್ರೈಲುಮಾರ್ಗದಲ್ಲಿಗುಡ್ಡ ಕುಸಿತ ಉಂಟಾಗಿದೆ. ಆದ್ದರಿಂದ, ನೈಋತ್ಯರೈಲ್ವೆಯ ಮೈಸೂರು ವಿಭಾಗದಹಾಸನ– ಮಂಗಳೂರು ನಡುವಿನ ರೈಲುಗಳ ಸಂಚಾರವನ್ನುರದ್ದು ಮಾಡಲಾಗಿದೆ.
ಆ.24ರಂದುಸಂಚರಿಸಬೇಕಿದ್ದಕಾರವಾರ– ಯಶವಂತಪುರ ಎಕ್ಸ್ಪ್ರೆಸ್ (16516),23 ಮತ್ತು 24ರಂದು ಸಂಚರಿಸಬೇಕಿದ್ದಕಾರವಾರ– ಕಣ್ಣೂರು– ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16518/16524) ಹಾಗೂ ಕೆಎಸ್ಆರ್ ಬೆಂಗಳೂರು– ಕಣ್ಣೂರು– ಕಾರವಾರಎಕ್ಸ್ಪ್ರೆಸ್ ಸಂಪೂರ್ಣ ರದ್ದಾಗಿದೆ.
25ರ ಕಾರವಾರ– ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16514) ರೈಲು ಸಂಚಾರ ಭಾಗಶಃ ರದ್ದಾಗಿದೆ.ಕಾರವಾರ– ಮಂಗಳೂರು ನಡುವಿನ ಓಡಾಟವನ್ನುಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.