‘ಹಿಂದೂಯೇತರರಿಗೆ ಅಂಗಡಿ ನೀಡದಂತೆ ವ್ಯವಸ್ಥಾಪನ ಸಮಿತಿ ನಿರ್ಧರಿಸಿಲ್ಲ. ದೇವಸ್ಥಾನದ 100 ಮೀ. ಹೊರಗೆ ಯಾರಿಗೆ ಬೇಕಾದರೂ ಮಳಿಗೆ ನೀಡಲು ಅವಕಾಶವಿದೆ. ಆದರೆ ಹಿಂದೂ ವ್ಯಾಪಾರಿಗಳ ಹೊರತಾಗಿ ಬೇರೆಯವರು ಮಳಿಗೆಗೆ ಅವಕಾಶ ಕೇಳಲು ಬಂದಿಲ್ಲ’ ಎಂದು ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಪ್ರಕಾಶ ಬಂಗ್ಲೆ ತಿಳಿಸಿದರು. ಅಧ್ಯಕ್ಷ ರಾಜಶೇಖರ ಒಡೆಯರ್, ಮಾಜಿ ಅಧ್ಯಕ್ಷ ಟಿ.ಜಿ.ನಾಡಿಗೇರ್ ಇದ್ದರು.