'ಚೆಕ್ ಅಮಾನ್ಯ, ಮೋಟಾರ್ ವಾಹನ ಅಪಘಾತ ಪ್ರಕರಣಗಳು, ಕಾರ್ಮಿಕರಿಗೆ ಸಂಬಂಧಿಸಿದ ವ್ಯಾಜ್ಯಗಳು, ವೈವಾಹಿಕ ವಿವಾದಗಳು, ಆಸ್ತಿ ಕಲಹ ಮುಂತಾದ ರಾಜಿ ಮಾಡಲು ಸಾಧ್ಯ ಇರುವ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಪರಿಗಣಿಸಲಾಗುತ್ತದೆ. ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ವಿಚಾರದಲ್ಲಿ ಪರಿಹಾರ ನೀಡಲು ಜಿಲ್ಲೆಗೆ ರೂ 700 ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ. ಹಾಗಾಗಿ ಅಂತಹ ದೂರುಗಳನ್ನೂ ನಿಯಮದ ಪ್ರಕಾರ ರಾಜಿಗೆ ಪರಿಶೀಲಿಸಲಾಗುತ್ತದೆ' ಎಂದು ತಿಳಿಸಿದರು.