ಟಿಎಂಎಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೋಟಿಯಲ್ಲಿ ಮದ್ದು ಹೊಡೆಯುವ ಹಾಗೂ ಬ್ಯಾಟರಿ ಚಾಲಿತ ಸ್ಪ್ರೇಯರ್ ಬಳಸುವ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಈ ಉಪಕರಣ ಉಪಯೋಗಿಸುತ್ತಿರುವ ಉಂಚಳ್ಳಿಯ ಧನಂಜಯ ಹೆಗಡೆ ಮಾಹಿತಿ ನೀಡಿ, ‘ಇದು ಕಾರ್ಬನ್ ಫೈಬರ್ನಿಂದ ಮಾಡಿರುವ ದೋಟಿಯಾಗಿದೆ. ಪೈಪ್ ಒಳಗಿನ ಮದ್ದು ಸೇರಿ ೫ ಕೆಜಿ ಭಾರ ಇರುತ್ತದೆ. ಇಡೀ ತೋಟದಲ್ಲಿ ಬೇಕಾದ ಕಡೆ ಸಾಗಿಸಬಹುದು. ನೆಲದಲ್ಲಿಯೇ ನಿಂತು 80 ಅಡಿ ಎತ್ತರದಲ್ಲಿನ ಅಡಿಕೆ ಗೊನೆಗೆ ಮದ್ದು ಸಿಂಪಡಣೆ ಮಾಡಬಹುದು. ಅಲ್ಲದೇ, ಗೊನೆಯನ್ನೂ ಕೊಯ್ಯಬಹುದು’ ಎಂದರು.