<p><strong>ಶಿರಸಿ:</strong> ಜಾತ್ರೆಯ ಭಾಗವಾಗಿ ನಡೆಯುವ ಮಾರಿಕಾಂಬಾ ದೇವಿ ಕಲ್ಯಾಣೋತ್ಸವ ಮಂಗಳವಾರ ರಾತ್ರಿ 11.33ರ ಮುಹೂರ್ತಕ್ಕೆ ನೆರವೇರಿತು. ದೇವಸ್ಥಾನದ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರುದೇವಿಯ ಕಲ್ಯಾಣವನ್ನು ಕಣ್ತುಂಬಿಕೊಂಡು ಪುಳಕಿತರಾದರು.</p>.<p>ಮಾರಿಕಾಂಬೆಯ ಜಾತ್ರೆ ಆಚರಣೆಯ ಹಿಂದೆ ಇರುವ ಜಾನಪದ ಕಥೆಯ ಭಾಗವಾಗಿ ಕಲ್ಯಾಣೋತ್ಸವ ಆಚರಣೆ ನಡೆಯುತ್ತದೆ ಎಂಬ ಪ್ರತೀತಿ ಇದೆ. ರಥ ಪೂಜೆ ಬಳಿಕ ಕಲ್ಯಾಣೋತ್ಸವ ಪ್ರಮುಖ ಧಾರ್ಮಿಕ ಆಚರಣೆ.</p>.<p>ದೇವಾಲಯದ ಸಭಾಮಂಟಪದಲ್ಲಿ ಸಂಜೆ ವೇಳೆಗೆ ಪ್ರತಿಷ್ಠಾಪಿಸಲಾದ ದೇವಿಯನ್ನು ಅರ್ಚಕರು ಅಲಂಕರಿಸಿದರು. ಧರ್ಮದರ್ಶಿ ಮಂಡಳದವರು, ಬಾಬುದಾರರು ಮಾರಿಕಾಂಬೆಯನ್ನು ವರಿಸುವ ನಾಡಿಗ ಕುಟುಂಬದ ಮನೆಗೆ ತೆರಳಿ ಅವರನ್ನು ಮೆರವಣಿಗೆಯಲ್ಲಿ ಕರೆತಂದರು.</p>.<p>ಬೀಗರ ಕುಟುಂಬ ದೇವಸ್ಥಾನಕ್ಕೆ ಬರುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ಕಲ್ಯಾಣೋತ್ಸವದ ವಿಧಿವಿಧಾನ ಪೂರೈಸಿದ ಬಳಿಕ ನಾಡಿಗ ಮನೆತನದ ವಿಜಯ ನಾಡಿಗ ದೇವಿಗೆ ಮಾಂಗಲ್ಯಧಾರಣೆ ಮಾಡಿದರು. ದೇವಿಯ ಸಹೋದರಿಯರಾದ ಮರ್ಕಿದುರ್ಗಿಯರಿಗೂ ಪೂಜೆ ಸಲ್ಲಿಸಲಾಯಿತು.</p>.<p>‘ಹೊರಬೀಡು ನಡೆಸಿ ದೇವಿ ಮೂರ್ತಿ ವಿಸರ್ಜಿಸಿದ ಬಳಿಕ ಕಲ್ಯಾಣೋತ್ಸವ ನಡೆಯಬೇಕು. ಆಗ ದೇವಿ ಮತ್ತಷ್ಟು ಕಾಂತಿವಂತಳಾಗುತ್ತಾಳೆ. ಜಾತ್ರೆಯ ಆಚರಣೆಯಲ್ಲಿ ಈ ಪ್ರಕ್ರಿಯೆಗೆ ಹೆಚ್ಚು ಮಹತ್ವವೂ ಇದೆ’ ಎಂದು ಅರ್ಚಕರೊಬ್ಬರು ವಿವರಿಸಿದರು.</p>.<p>ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಲ್ಯಾಣೋತ್ಸವ ವೀಕ್ಷಿಸಿದರು. ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ, ಸದಸ್ಯರಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಜಾತ್ರೆಯ ಭಾಗವಾಗಿ ನಡೆಯುವ ಮಾರಿಕಾಂಬಾ ದೇವಿ ಕಲ್ಯಾಣೋತ್ಸವ ಮಂಗಳವಾರ ರಾತ್ರಿ 11.33ರ ಮುಹೂರ್ತಕ್ಕೆ ನೆರವೇರಿತು. ದೇವಸ್ಥಾನದ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರುದೇವಿಯ ಕಲ್ಯಾಣವನ್ನು ಕಣ್ತುಂಬಿಕೊಂಡು ಪುಳಕಿತರಾದರು.</p>.<p>ಮಾರಿಕಾಂಬೆಯ ಜಾತ್ರೆ ಆಚರಣೆಯ ಹಿಂದೆ ಇರುವ ಜಾನಪದ ಕಥೆಯ ಭಾಗವಾಗಿ ಕಲ್ಯಾಣೋತ್ಸವ ಆಚರಣೆ ನಡೆಯುತ್ತದೆ ಎಂಬ ಪ್ರತೀತಿ ಇದೆ. ರಥ ಪೂಜೆ ಬಳಿಕ ಕಲ್ಯಾಣೋತ್ಸವ ಪ್ರಮುಖ ಧಾರ್ಮಿಕ ಆಚರಣೆ.</p>.<p>ದೇವಾಲಯದ ಸಭಾಮಂಟಪದಲ್ಲಿ ಸಂಜೆ ವೇಳೆಗೆ ಪ್ರತಿಷ್ಠಾಪಿಸಲಾದ ದೇವಿಯನ್ನು ಅರ್ಚಕರು ಅಲಂಕರಿಸಿದರು. ಧರ್ಮದರ್ಶಿ ಮಂಡಳದವರು, ಬಾಬುದಾರರು ಮಾರಿಕಾಂಬೆಯನ್ನು ವರಿಸುವ ನಾಡಿಗ ಕುಟುಂಬದ ಮನೆಗೆ ತೆರಳಿ ಅವರನ್ನು ಮೆರವಣಿಗೆಯಲ್ಲಿ ಕರೆತಂದರು.</p>.<p>ಬೀಗರ ಕುಟುಂಬ ದೇವಸ್ಥಾನಕ್ಕೆ ಬರುತ್ತಿದ್ದಂತೆ ಮಂಗಳವಾದ್ಯಗಳು ಮೊಳಗಿದವು. ಕಲ್ಯಾಣೋತ್ಸವದ ವಿಧಿವಿಧಾನ ಪೂರೈಸಿದ ಬಳಿಕ ನಾಡಿಗ ಮನೆತನದ ವಿಜಯ ನಾಡಿಗ ದೇವಿಗೆ ಮಾಂಗಲ್ಯಧಾರಣೆ ಮಾಡಿದರು. ದೇವಿಯ ಸಹೋದರಿಯರಾದ ಮರ್ಕಿದುರ್ಗಿಯರಿಗೂ ಪೂಜೆ ಸಲ್ಲಿಸಲಾಯಿತು.</p>.<p>‘ಹೊರಬೀಡು ನಡೆಸಿ ದೇವಿ ಮೂರ್ತಿ ವಿಸರ್ಜಿಸಿದ ಬಳಿಕ ಕಲ್ಯಾಣೋತ್ಸವ ನಡೆಯಬೇಕು. ಆಗ ದೇವಿ ಮತ್ತಷ್ಟು ಕಾಂತಿವಂತಳಾಗುತ್ತಾಳೆ. ಜಾತ್ರೆಯ ಆಚರಣೆಯಲ್ಲಿ ಈ ಪ್ರಕ್ರಿಯೆಗೆ ಹೆಚ್ಚು ಮಹತ್ವವೂ ಇದೆ’ ಎಂದು ಅರ್ಚಕರೊಬ್ಬರು ವಿವರಿಸಿದರು.</p>.<p>ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಲ್ಯಾಣೋತ್ಸವ ವೀಕ್ಷಿಸಿದರು. ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ, ಸದಸ್ಯರಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>