ಉತ್ಸವ ಆರಂಭವಾಗುತ್ತಿದ್ದಂತೆ, ದೇವಸ್ಥಾನದ ಆವರಣದಲ್ಲಿ ಸೇರಿದ್ದ ನೂರಾರು ಭಕ್ತರು‘ದಾಡ್ ದೇವ್ ಕೀ ಜೈ’ ಎಂದು ಜಯಘೋಷ ಕೂಗುತ್ತ ಹರಕೆ ಸಲ್ಲಿಸಿದರು. ಕನಕಾಂಬರ ಹೂವಿನ ಮಾಲೆಯಿಂದ ಅಲಂಕರಿಸಿದ್ದ ಎರಡು ಬಂಡಿಗಳಿಗೆ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇದೇವೇಳೆ, ದೇವಸ್ಥಾನದಎದುರು ಮಕ್ಕಳ ಹೊಟ್ಟೆಯ ಮೇಲಿನ ಚರ್ಮಕ್ಕೆ ಸೂಜಿಯಿಂದ ಚುಚ್ಚಿ ದಾರವನ್ನು ಎಳೆದು ಹರಕೆಯೊಪ್ಪಿಸಿದರು.