ಸಾಲ ಮಾಡಿ ಜಾಗ ಖರೀದಿಸಿದವರಿಗೆ, ಮನೆ ಕಟ್ಟಲು ಪರವಾನಗಿ ಸಿಗುತ್ತಿಲ್ಲ. ಇಲಾಖೆಯೇ ನಿವೇಶನ ಮಾಡಿಕೊಟ್ಟ ಜಾಗವನ್ನು ಪರಭಾರೆ ಮಾಡುವಂತಿಲ್ಲ. ಪಂಚಾಯ್ತಿಯಿಂದ ವಾಸ್ತವ್ಯ ಪ್ರಮಾಣಪತ್ರ ಸಿಗದ ಕಾರಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಆಗುತ್ತಿಲ್ಲ. ಹಾಗಾಗಿ ಸರ್ವೆ ಸಂಖ್ಯೆ 53ರ ವ್ಯವಹಾರಗಳನ್ನು ಸ್ಥಗಿತಗೊಳಿಸಲು ನೀಡಿದ ಆದೇಶ ಹಿಂಪಡೆಯಬೇಕು. ಜೊತೆಗೆ ಇಲಾಖೆಗಳ ಮಟ್ಟದಲ್ಲಿ ಈ ದಾಖಲೆಗಳನ್ನು ಪಡೆಯಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಸ್ಥಳೀಯರಾದ ಸದಾನಂದ ಗೌಡರ್, ಮುಕ್ತೇಶ ಗೌಡ, ಬಾಬು ಹಂದ್ರಾಳ, ಜ್ಯೋತಿ ಗೌಡ, ಚಂದ್ರಶೇಖರ ಭಟ್ಟ, ಸುಬ್ರಾಯ ಶೆಟ್ಟಿ, ದತ್ತಾತ್ರೇಯ ಶರ್ಮ, ಹನುಮಂತ ನಾಯ್ಕ ಇದ್ದರು.