‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವೈದ್ಯಕೀಯ ಸೌಲಭ್ಯಗಳ ಕೊರತೆಯ ನಡುವೆಯೂ ಕೋವಿಡ್, ಲಾಕ್ಡೌನ್ ಅವಧಿಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದ ಸಂತೃಪ್ತಿಯಿದೆ. ಜಿಲ್ಲಾಡಳಿತದ ಆದೇಶ, ಸೂಚನೆ, ಸಲಹೆಗಳಿಗೆ ಸಾರ್ವಜನಿಕರ ಉತ್ತಮ ಸಹಕಾರವೂ ದೊರೆತ ಕಾರಣ ಇದು ಸಾಧ್ಯವಾಯಿತು’ ಎಂದರು.