<p><strong>ಶಿರಸಿ:</strong> ಆಜಾನ್, ಹಿಜಾಬ್, ಹಲಾಲ್ ಹೀಗೆ ಸಾಲು ಸಾಲು ವಿವಾದಗಳು ಉದ್ಭವಿಸುತ್ತಿರುವ ಹೊತ್ತಲ್ಲೂ ಹಲವೆಡೆ ಧಾರ್ಮಿಕ ಸಾಮರಸ್ಯ ಕದಡದೆ ಗಟ್ಟಿಯಾಗಿ ನಿಂತಿದೆ. ಇದಕ್ಕೆ ತಾಲ್ಲೂಕಿನ ಸ್ವರ್ಣವಲ್ಲಿ ಮಠವೂ ಉದಾಹರಣೆ.</p>.<p>ಪ್ರತಿ ವರ್ಷ ಲಕ್ಷ್ಮೀನರಸಿಂಹ ಜಯಂತಿ ದಿನದಂದು ಇಲ್ಲಿ ರಥೋತ್ಸವ ನಡೆಯುತ್ತದೆ. ಈ ದಿನವನ್ನು ಕೃಷಿ ಜಯಂತಿ ಎಂದೂ ಆಚರಿಸಲಾಗುತ್ತಿದೆ. ಮೇ 14 ಕ್ಕೆ ಈ ಬಾರಿ ರಥೋತ್ಸವ ನಡೆಯಲಿದ್ದು, ಲಕ್ಷ್ಮೀನರಸಿಂಹ ದೇವರು ಪ್ರತಿಷ್ಠಾಪನೆಗೊಳ್ಳುವ ರಥವನ್ನು ನಿರ್ಮಿಸುತ್ತಿರುವುದು ಸೋಂದಾದ ಮುಸ್ಲಿಂ ಕುಟುಂಬ ಎಂಬುದೇ ವಿಶೇಷ.</p>.<p>ಹಸನ್ ಸಾಬ್ ಅಬ್ದುಲ್ ಖಾಜಿಸಾಬ್ ಎಂಬುವವರ ಕುಟುಂಬದ ನೇತೃತ್ವದಲ್ಲಿ ರವೂಫ್, ನಜೀರ, ಇತರರು ರಥ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಾರೆ. ರಥೋತ್ಸವ ಮುಗಿದ ಬಳಿಕ ರಥಕ್ಕೆ ಕಟ್ಟಿದ ಪರಿಕರ ಕಳಚುವ ಕೆಲಸವನ್ನೂ ನಿರ್ವಹಿಸುತ್ತಾರೆ. ಈ ಕಾರ್ಯಗಳಿಗೆ ಮಠದಿಂದ ಗೌರವಾರ್ಥವಾಗಿ ಧವಸ ಧಾನ್ಯಗಳನ್ನು ನೀಡುವ ಪದ್ಧತಿ ಇದೆ.</p>.<p>‘ನೂರಾರು ವರ್ಷಗಳಿಂದ ಸ್ವರ್ಣವಲ್ಲಿ ಮಠದ ರಥ ನಿರ್ಮಿಸುವ ಕೆಲಸವನ್ನು ನಮ್ಮ ಪೂರ್ವಜರು ನಡೆಸಿಕೊಂಡು ಬಂದಿದ್ದರು. ಅದನ್ನು ನಾವೂ ಮುಂದುವರೆಸಿದ್ದೇವೆ. ಧರ್ಮ ಭೇದವನ್ನು ನಾವು ಎಂದಿಗೂ ಎಣಿಸಿಲ್ಲ’ ಎನ್ನುತ್ತಾರೆ ಹಸನ್ ಸಾಬ್.</p>.<p>‘ಮುಸ್ಲಿಂ ಸಮುದಾಯವರೇ ರಥ ಕಟ್ಟುವ ನಿರ್ದಿಷ್ಟ ಕಾರಣ ಅಥವಾ ಇತಿಹಾಸದ ಉಲ್ಲೇಖವಿಲ್ಲ. ಸೋದೆ ಅರಸರ ಕಾಲದಿಂದಲೂ ಸೋಂದಾ ಭಾಗದಲ್ಲಿ ಧಾರ್ಮಿಕ ಸಾಮರಸ್ಯವಿದ್ದು ರಥ ಕಟ್ಟುವ ಕಾರ್ಯವೂ ಅದರ ಮುಂದುವರಿದ ಭಾಗದಂತಿದೆ’ ಎನ್ನುತ್ತಾರೆ ಇತಿಹಾಸಕಾರ ಡಾ.ಲಕ್ಷ್ಮೀಶ ಸೋಂದಾ.</p>.<p>‘ಸಮಾಜದಲ್ಲಿ ಸೌಹಾರ್ದ ಮುಖ್ಯ. ಪರಸ್ಪರ ಗೌರವಿಸುವ ಗುಣ ಇದ್ದರೆ ಸಮಸ್ಯೆ ಉಂಟಾಗದು’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಆಜಾನ್, ಹಿಜಾಬ್, ಹಲಾಲ್ ಹೀಗೆ ಸಾಲು ಸಾಲು ವಿವಾದಗಳು ಉದ್ಭವಿಸುತ್ತಿರುವ ಹೊತ್ತಲ್ಲೂ ಹಲವೆಡೆ ಧಾರ್ಮಿಕ ಸಾಮರಸ್ಯ ಕದಡದೆ ಗಟ್ಟಿಯಾಗಿ ನಿಂತಿದೆ. ಇದಕ್ಕೆ ತಾಲ್ಲೂಕಿನ ಸ್ವರ್ಣವಲ್ಲಿ ಮಠವೂ ಉದಾಹರಣೆ.</p>.<p>ಪ್ರತಿ ವರ್ಷ ಲಕ್ಷ್ಮೀನರಸಿಂಹ ಜಯಂತಿ ದಿನದಂದು ಇಲ್ಲಿ ರಥೋತ್ಸವ ನಡೆಯುತ್ತದೆ. ಈ ದಿನವನ್ನು ಕೃಷಿ ಜಯಂತಿ ಎಂದೂ ಆಚರಿಸಲಾಗುತ್ತಿದೆ. ಮೇ 14 ಕ್ಕೆ ಈ ಬಾರಿ ರಥೋತ್ಸವ ನಡೆಯಲಿದ್ದು, ಲಕ್ಷ್ಮೀನರಸಿಂಹ ದೇವರು ಪ್ರತಿಷ್ಠಾಪನೆಗೊಳ್ಳುವ ರಥವನ್ನು ನಿರ್ಮಿಸುತ್ತಿರುವುದು ಸೋಂದಾದ ಮುಸ್ಲಿಂ ಕುಟುಂಬ ಎಂಬುದೇ ವಿಶೇಷ.</p>.<p>ಹಸನ್ ಸಾಬ್ ಅಬ್ದುಲ್ ಖಾಜಿಸಾಬ್ ಎಂಬುವವರ ಕುಟುಂಬದ ನೇತೃತ್ವದಲ್ಲಿ ರವೂಫ್, ನಜೀರ, ಇತರರು ರಥ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಾರೆ. ರಥೋತ್ಸವ ಮುಗಿದ ಬಳಿಕ ರಥಕ್ಕೆ ಕಟ್ಟಿದ ಪರಿಕರ ಕಳಚುವ ಕೆಲಸವನ್ನೂ ನಿರ್ವಹಿಸುತ್ತಾರೆ. ಈ ಕಾರ್ಯಗಳಿಗೆ ಮಠದಿಂದ ಗೌರವಾರ್ಥವಾಗಿ ಧವಸ ಧಾನ್ಯಗಳನ್ನು ನೀಡುವ ಪದ್ಧತಿ ಇದೆ.</p>.<p>‘ನೂರಾರು ವರ್ಷಗಳಿಂದ ಸ್ವರ್ಣವಲ್ಲಿ ಮಠದ ರಥ ನಿರ್ಮಿಸುವ ಕೆಲಸವನ್ನು ನಮ್ಮ ಪೂರ್ವಜರು ನಡೆಸಿಕೊಂಡು ಬಂದಿದ್ದರು. ಅದನ್ನು ನಾವೂ ಮುಂದುವರೆಸಿದ್ದೇವೆ. ಧರ್ಮ ಭೇದವನ್ನು ನಾವು ಎಂದಿಗೂ ಎಣಿಸಿಲ್ಲ’ ಎನ್ನುತ್ತಾರೆ ಹಸನ್ ಸಾಬ್.</p>.<p>‘ಮುಸ್ಲಿಂ ಸಮುದಾಯವರೇ ರಥ ಕಟ್ಟುವ ನಿರ್ದಿಷ್ಟ ಕಾರಣ ಅಥವಾ ಇತಿಹಾಸದ ಉಲ್ಲೇಖವಿಲ್ಲ. ಸೋದೆ ಅರಸರ ಕಾಲದಿಂದಲೂ ಸೋಂದಾ ಭಾಗದಲ್ಲಿ ಧಾರ್ಮಿಕ ಸಾಮರಸ್ಯವಿದ್ದು ರಥ ಕಟ್ಟುವ ಕಾರ್ಯವೂ ಅದರ ಮುಂದುವರಿದ ಭಾಗದಂತಿದೆ’ ಎನ್ನುತ್ತಾರೆ ಇತಿಹಾಸಕಾರ ಡಾ.ಲಕ್ಷ್ಮೀಶ ಸೋಂದಾ.</p>.<p>‘ಸಮಾಜದಲ್ಲಿ ಸೌಹಾರ್ದ ಮುಖ್ಯ. ಪರಸ್ಪರ ಗೌರವಿಸುವ ಗುಣ ಇದ್ದರೆ ಸಮಸ್ಯೆ ಉಂಟಾಗದು’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>