ಇಲ್ಲಿನ ಗಣೇಶ ನಗರದ ರಾಮಾ ಹನುಮಂತಪ್ಪ ಹಿರೇಮಠ ಎಂಬ ವೃದ್ಧ ವಾಸಿಸುವ ಮನೆ ಮಳೆಗೆ ದುಸ್ಥಿತಿಯ ಹಂತ ತಲುಪಿದೆ. ಒಬ್ಬಂಟಿಯಾಗಿ ವಾಸವಿರುವ ಅಜ್ಜನಿಗೆ ಮನೆ ದುರಸ್ತಿ ಮಾಡಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಮಳೆನೀರು ಮನೆಯೊಳಗೆ ತುಂಬಿಕೊಳ್ಳುತ್ತಿದ್ದರೂ ಅಲ್ಲಲ್ಲಿ ಪಾತ್ರೆಗಳನ್ನಿಟ್ಟಿರುವ ರಾಮಾ ಅವರು ಮನೆಯ ಆವರಣದಲ್ಲಿ ಮಂಚ ಹಾಕಿ ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ನೆರೆ ಮನೆಯವರು ನೀಡಿದ ಊಟ, ಉಪಹಾರವನ್ನೇ ನಂಬಿ ದಿನ ಕಳೆಯುತ್ತಿದ್ದಾರೆ.