‘ಕಾರವಾರದಲ್ಲಿ ಕೊಂಕಣಿ ಸೇರಿದಂತೆ ಅನ್ಯ ಭಾಷಿಕರು ವಾಸವಿದ್ದರೂ ಅವರೆಲ್ಲರೂ ಮೂಲತಃ ಕನ್ನಡಾಭಿಮಾನಿಗಳೇ ಆಗಿದ್ದಾರೆ. ಇಲ್ಲಿ ಭಾಷಾ ಸಾಮರಸ್ಯವನ್ನೂ ಮೊದಲಿನಿಂದಲೂ ಕಾಪಾಡಿಕೊಂಡು ಬಂದಿರುವ ಹೆಮ್ಮೆಗೆ ಇಲ್ಲಿನ ನಿವಾಸಿಗಳು ಪಾತ್ರರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ನಗರಸಭೆಯ ವ್ಯಾಪ್ತಿಯ ವಾರ್ಡ್ಗಳಿಗೆ ಸಂಬಂಧಿಸಿದ ನಾಮಫಲಕಗಳನ್ನು, ಕನ್ನಡದ ಜೊತೆಗೆ ಹಿಂದಿಯಲ್ಲೂ ಅಳವಡಿಸಿರುವುದು ಸಹಜವಾಗಿ ಕನ್ನಡಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.