ಗೋಕರ್ಣದ ಮಜ್ಜಿಗೆ ಮೆಣಸಿಗೆ ಗ್ರಾಹಕರು ಮುಗಿಬಿದ್ದರು. ನಾಗರಾಜ ಗೌಡ ಅವರು, ಬದನೆಕಾಯಿ, ಚೌಳಿಕಾಯಿ, ತೊಂಡೆಕಾಯಿ, ಹಾಗಲಕಾಯಿ ಹೀಗೆ ಹಲವಾರು ತರಕಾರಿಗಳನ್ನು ತಂದಿದ್ದರು. ಹಿತ್ಲಕಾರಗದ್ದೆಯ ಶಂಕರ ಭಟ್ಟ ಅವರು, ಬಿಸಿ ಬಿಸಿ ಮೆಂತೆ ದೋಸೆ, ರಾಗಿ ದೋಸೆ ತಯಾರಿಸಿ ಕೊಡುತ್ತಿದ್ದರು. ಸಿದ್ದಾಪುರ ಕಿಲಾರದ ಕೆಂಪಕ್ಕಿ, ಸಿರಿಧಾನ್ಯದ ತಿನಿಸುಗಳು ಸಂತೆಯಲ್ಲಿದ್ದವು.