<p>ಶಿರಸಿ: ತಾಲ್ಲೂಕಿನ ಸೋಂದಾದ ಜೈನಮಠದ ವತಿಯಿಂದ ಇಲ್ಲಿನ ರಾಯರಪೇಟೆಯಲ್ಲಿ ಪುನರುಜ್ಜೀವಗೊಂಡ ಜೈನ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು.</p>.<p>ನಗರದ ಎಸ್ಬಿಐ ವೃತ್ತದಿಂದ ಪಾರ್ಶ್ವನಾಥರ ಮೂರ್ತಿಯನ್ನು ಬಸದಿಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಮಂಗಲಸ್ನಾನದ ಬಳಿಕ ವಾದ್ಯಘೋಷ, ಪೂರ್ಣಕುಂಭಗಳೊಂದಿಗೆ ಮೂರ್ತಿಯನ್ನು ಅಶ್ವಾರೂಢ ರಥದಲ್ಲಿ ಕೊಂಡೊಯ್ಯಲಾಯಿತು. ಜತೆಯಲ್ಲಿ ಆನೆಯ ಮೇಲೆ ಕುಳಿತಿದ್ದ ಇಂದ್ರ ಇಂದ್ರಾಣಿಯರು ಸಾಗಿದರು.</p>.<p>ಬಸದಿಯಲ್ಲಿ ಪಂಚಾಮೃತ ಅಭಿಷೇಕ, ನವಗ್ರಹ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಧರ್ಮಸಭೆ ನಡೆಯಿತು. ರಾತ್ರಿ ನಡೆದ ಇಂದ್ರಸಭೆಯಲ್ಲಿ ಗರ್ಭಾವತರಣ ಕಲ್ಯಾಣದ ಮೂಲಕ 16 ಸ್ವಪ್ನಗಳ ದರ್ಶನ ಮಾಡಿಸಲಾಯಿತು.</p>.<p>ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಪುಣ್ಯ ಸಾಗರ ಮಹಾರಾಜರು, ಕಂಬದಳ್ಳಿ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ತಾಲ್ಲೂಕಿನ ಸೋಂದಾದ ಜೈನಮಠದ ವತಿಯಿಂದ ಇಲ್ಲಿನ ರಾಯರಪೇಟೆಯಲ್ಲಿ ಪುನರುಜ್ಜೀವಗೊಂಡ ಜೈನ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು.</p>.<p>ನಗರದ ಎಸ್ಬಿಐ ವೃತ್ತದಿಂದ ಪಾರ್ಶ್ವನಾಥರ ಮೂರ್ತಿಯನ್ನು ಬಸದಿಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಮಂಗಲಸ್ನಾನದ ಬಳಿಕ ವಾದ್ಯಘೋಷ, ಪೂರ್ಣಕುಂಭಗಳೊಂದಿಗೆ ಮೂರ್ತಿಯನ್ನು ಅಶ್ವಾರೂಢ ರಥದಲ್ಲಿ ಕೊಂಡೊಯ್ಯಲಾಯಿತು. ಜತೆಯಲ್ಲಿ ಆನೆಯ ಮೇಲೆ ಕುಳಿತಿದ್ದ ಇಂದ್ರ ಇಂದ್ರಾಣಿಯರು ಸಾಗಿದರು.</p>.<p>ಬಸದಿಯಲ್ಲಿ ಪಂಚಾಮೃತ ಅಭಿಷೇಕ, ನವಗ್ರಹ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಧರ್ಮಸಭೆ ನಡೆಯಿತು. ರಾತ್ರಿ ನಡೆದ ಇಂದ್ರಸಭೆಯಲ್ಲಿ ಗರ್ಭಾವತರಣ ಕಲ್ಯಾಣದ ಮೂಲಕ 16 ಸ್ವಪ್ನಗಳ ದರ್ಶನ ಮಾಡಿಸಲಾಯಿತು.</p>.<p>ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಪುಣ್ಯ ಸಾಗರ ಮಹಾರಾಜರು, ಕಂಬದಳ್ಳಿ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>