‘ಅಡಿಕೆ, ಕಾಳುಮೆಣಸು ಸಂಶೋಧನಾ ಕೇಂದ್ರಗಳಿದ್ದರೂ, ಅವುಗಳಿಂದ ಅಗತ್ಯಕ್ಕುನಗುಣವಾದ ಸಂಶೋಧನೆ ಆಗುತ್ತಿಲ್ಲ. ಹೀಗಾಗಿ ಮಲೆನಾಡಿನ ಅಡಿಕೆ, ಸಾಂಬಾರು ಬೆಳೆಗಾರರು ಬಹುವರ್ಷಗಳಿಂದ ನಿರೀಕ್ಷೆಯಲ್ಲಿರುವ ಆಧುನಿಕ ಯಾಂತ್ರೀಕರಣಕ್ಕೆ ಸರ್ಕಾರ ಅನುದಾನ ನೀಡಬೇಕು. ಮರ ಹತ್ತದೇ, ನೆಲದ ಮೇಲೆ ನಿಂತು ಅಡಿಕೆಗೆ ಔಷಧ ಸಿಂಪರಣೆ ಮಾಡುವ, ಕೊಳೆ ರೋಗ ನಿಯಂತ್ರಿಸುವ ಸಂಶೋಧನೆಗಳ ಬಗ್ಗೆ ಸರ್ಕಾರ ಯೋಚಿಸಬೇಕು. ಸಣ್ಣ ಸಂಸ್ಥೆಗಳಿಗೆ ಇಂತಹ ಕಾರ್ಯ ಭಾರವಾಗುವ ಕಾರಣ ಸರ್ಕಾರವೇ ಇದಕ್ಕೆ ಆಸಕ್ತಿ ತೋರಬೇಕು’ ಎನ್ನುತ್ತಾರೆ ಯುವ ಧುರೀಣ ಶಶಿಭೂಷಣ ಹೆಗಡೆ.