<p><strong>ಶಿರಸಿ</strong>: ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲಳ್ಳದಲ್ಲಿರುವ ಕೋಳಿಫಾರಂ ಸ್ಥಳಾಂತರಿಸುವಂತೆ ಆಗ್ರಹಿಸಿ ಶನಿವಾರ ಸ್ಥಳೀಯರು ಕೋಳಿ ಫಾರಂ ಸಮೀಪ ರಸ್ತೆ ತಡೆ ನಡೆಸಿದರು.</p>.<p>ಹಾಲಳ್ಳ, ಮಣಜವಳ್ಳಿ, ಹುತ್ತಗಾರ, ಇನ್ನಿತರ ಭಾಗದ ಗ್ರಾಮಸ್ಥು ಸೇರಿ ಶಿರಸಿ-ಹುಲೇಕಲ್ ರಸ್ತೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆ ನಡೆಸಿದರು. ಕೋಳಿಫಾರಂನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಫಲಕ ಪ್ರದರ್ಶಿಸಿದರು.</p>.<p>ಸ್ಥಳೀಯರಾದ ಮನು ಹೆಗಡೆ, ‘ಕಳೆದ ಮೂವತ್ತು ವರ್ಷಗಳಿಂದ ಕೋಳಿಫಾರಂ ತ್ಯಾಜ್ಯದಿಂದ ಪರಿಸರ ಕಲುಶಿತಗೊಂಡಿದೆ. ಸಮೀಪದಲ್ಲಿ ಸರ್ಕಾರಿ ಶಾಲೆಯೂ ಇದ್ದು, ಅಲ್ಲಿನ ಬಾವಿಯ ನೀರು ಕಲುಶಿತಗೊಂಡಿದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ’ ಎಂದು ಆರೋಪಿಸಿದರು.</p>.<p>ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ‘ಕೋಳಿಫಾರಂ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಬಿಡುತ್ತಿದ್ದು ಇದು ಕೆಂಗ್ರೆ ಹೊಳೆಗೆ ಸೇರುತ್ತಿದೆ. ಹೀಗಾಗಿ ಇಲ್ಲಿಂದ ಶಿರಸಿ ನಗರಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಗುಣಮಟ್ಟದ ಬಗ್ಗೆಯೂ ಆತಂಕ ಎದುರಾಗಿದೆ’ ಎಂದರು.</p>.<p>‘ಜನರಿಗೆ ಆರೋಗ್ಯ ಸಮಸ್ಯೆ ತಂದೊಡ್ಡುತ್ತಿರುವ ಕೋಳಿಫಾರಂ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.</p>.<p>ಸ್ಥಳಕ್ಕೆ ಭೇಟಿ ನೀಡಿದ ಹುತ್ತಗಾರ ಗ್ರಾಮ ಪಂಚಾಯ್ತಿ ಪಿಡಿಓ ಜಗದೀಶ ತಳವಾರ, ‘ತ್ಯಾಜ್ಯ ನೀರು ಚರಂಡಿಗೆ ಬಿಡದಂತೆ ಮಾಲೀಕರಿಗೆ ನೊಟೀಸ್ ನೀಡಿದ್ದೇವೆ. ಕೋಳಿಫಾರಂ ಸ್ಥಗಿತಗೊಳಿಸುವ ಸಂಬಂಧ ಈ ಹಿಂದೆಯೂ ಹಲವು ಬಾರಿ ನೊಟೀಸ್ ನೀಡಲಾಗಿತ್ತು. ಸಾರ್ವಜನಿಕರ ದೂರಿನ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದರು.</p>.<p>ಸ್ಥಳೀಯರಾದ ಭಾಸ್ಕರ ಹೆಗಡೆ, ಅಂಜನಾ ಭಟ್, ಸಹನಾ ಹೆಗಡೆ, ಅಭಿರಾಮ ಹೆಗಡೆ, ಪ್ರಕಾಶ ಪೈ, ಗಣಪತಿ ಹೆಗಡೆ, ಪವನಕುಮಾರ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ತಾಲ್ಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಲಳ್ಳದಲ್ಲಿರುವ ಕೋಳಿಫಾರಂ ಸ್ಥಳಾಂತರಿಸುವಂತೆ ಆಗ್ರಹಿಸಿ ಶನಿವಾರ ಸ್ಥಳೀಯರು ಕೋಳಿ ಫಾರಂ ಸಮೀಪ ರಸ್ತೆ ತಡೆ ನಡೆಸಿದರು.</p>.<p>ಹಾಲಳ್ಳ, ಮಣಜವಳ್ಳಿ, ಹುತ್ತಗಾರ, ಇನ್ನಿತರ ಭಾಗದ ಗ್ರಾಮಸ್ಥು ಸೇರಿ ಶಿರಸಿ-ಹುಲೇಕಲ್ ರಸ್ತೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆ ನಡೆಸಿದರು. ಕೋಳಿಫಾರಂನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಫಲಕ ಪ್ರದರ್ಶಿಸಿದರು.</p>.<p>ಸ್ಥಳೀಯರಾದ ಮನು ಹೆಗಡೆ, ‘ಕಳೆದ ಮೂವತ್ತು ವರ್ಷಗಳಿಂದ ಕೋಳಿಫಾರಂ ತ್ಯಾಜ್ಯದಿಂದ ಪರಿಸರ ಕಲುಶಿತಗೊಂಡಿದೆ. ಸಮೀಪದಲ್ಲಿ ಸರ್ಕಾರಿ ಶಾಲೆಯೂ ಇದ್ದು, ಅಲ್ಲಿನ ಬಾವಿಯ ನೀರು ಕಲುಶಿತಗೊಂಡಿದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ’ ಎಂದು ಆರೋಪಿಸಿದರು.</p>.<p>ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ‘ಕೋಳಿಫಾರಂ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಬಿಡುತ್ತಿದ್ದು ಇದು ಕೆಂಗ್ರೆ ಹೊಳೆಗೆ ಸೇರುತ್ತಿದೆ. ಹೀಗಾಗಿ ಇಲ್ಲಿಂದ ಶಿರಸಿ ನಗರಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಗುಣಮಟ್ಟದ ಬಗ್ಗೆಯೂ ಆತಂಕ ಎದುರಾಗಿದೆ’ ಎಂದರು.</p>.<p>‘ಜನರಿಗೆ ಆರೋಗ್ಯ ಸಮಸ್ಯೆ ತಂದೊಡ್ಡುತ್ತಿರುವ ಕೋಳಿಫಾರಂ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.</p>.<p>ಸ್ಥಳಕ್ಕೆ ಭೇಟಿ ನೀಡಿದ ಹುತ್ತಗಾರ ಗ್ರಾಮ ಪಂಚಾಯ್ತಿ ಪಿಡಿಓ ಜಗದೀಶ ತಳವಾರ, ‘ತ್ಯಾಜ್ಯ ನೀರು ಚರಂಡಿಗೆ ಬಿಡದಂತೆ ಮಾಲೀಕರಿಗೆ ನೊಟೀಸ್ ನೀಡಿದ್ದೇವೆ. ಕೋಳಿಫಾರಂ ಸ್ಥಗಿತಗೊಳಿಸುವ ಸಂಬಂಧ ಈ ಹಿಂದೆಯೂ ಹಲವು ಬಾರಿ ನೊಟೀಸ್ ನೀಡಲಾಗಿತ್ತು. ಸಾರ್ವಜನಿಕರ ದೂರಿನ ಕುರಿತು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದರು.</p>.<p>ಸ್ಥಳೀಯರಾದ ಭಾಸ್ಕರ ಹೆಗಡೆ, ಅಂಜನಾ ಭಟ್, ಸಹನಾ ಹೆಗಡೆ, ಅಭಿರಾಮ ಹೆಗಡೆ, ಪ್ರಕಾಶ ಪೈ, ಗಣಪತಿ ಹೆಗಡೆ, ಪವನಕುಮಾರ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>