<p><strong>ಶಿರಸಿ</strong>: ‘ಉತ್ತಮ ವಿಚಾರಧಾರೆ, ಸಕಾರಾತ್ಮಕ ಚಿಂತನೆಗಳ ಜತೆಗೆ ಧರ್ಮ ಹಾಗೂ ಪರಂಪರೆಯನ್ನು ಯುವಪೀಳಿಗೆಗೆ ರೂಢಿಸಬೇಕು. ಆ ಮೂಲಕ ಸದ್ಭಾವನೆಯ ಸಮಾಜ ನಿರ್ಮಾಣಗೊಳ್ಳಲಿ’ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.</p>.<p>31ನೇ ಚಾತುರ್ಮಾಸ ವೃತ ಆರಂಭಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ‘ಶಿಕ್ಷಣದ ನೆಪದಲ್ಲಿ ಮಕ್ಕಳನ್ನು ಸಂಸ್ಕಾರದಿಂದ ದೂರ ಮಾಡುವ ಕೆಲಸ ಪಾಲಕರಿಂದ ಆಗಬಾರದು’ ಎಂದು ಹೇಳಿದರು.</p>.<p>‘ಹಳ್ಳಿಯ ವಾತಾವರಣದಲ್ಲಿ ಸಾಮೂಹಿಕವಾಗಿ ಹಬ್ಬಗಳ ಆಚರಣೆ ಬಹಳ ಕಡಿಮೆಯಾಗಿದೆ. ಇದರಿಂದ ಮನುಷ್ಯನ ಮನಸ್ಸು ವಿಕೃತವಾಗುತ್ತಿದೆ. ಸಾಮೂಹಿಕ ಹಬ್ಬಗಳ ಆಚರಣೆಯಿಂದ ಐಕ್ಯಭಾವ ಮೂಡುತ್ತದೆ’ ಎಂದರು.</p>.<p>ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ, ‘ಧರ್ಮದ ಉಳಿವಿಗೆ ಋಷಿಮುನಿಗಳು, ಸಂತರ ಅನುಷ್ಠಾನ ಬಲ ಕಾರಣ’ ಎಂದರು.</p>.<p>ವಿಶ್ವೇಶ್ವರ ಭಟ್ಟ ಕೆರೆಕೈ ಅವರಿಗೆ ‘ಪುರೋಹಿತ ಶಿರೋಮಣಿ’, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್.ಹೆಗಡೆ ಭೈರುಂಬೆ ಅವರಿಗೆ ‘ಸಾಧಕ ಶಿರೋಮಣಿ’ ಬಿರುದು ನೀಡಿ ಸನ್ಮಾನಿಸಲಾಯಿತು.ರಾಮಾನುಭವ ಸಪ್ತಾಹ ತಾಳಮದ್ದಲೆ ಧ್ವನಿಮುದ್ರಿಕೆ ಬಿಡುಗಡೆಗೊಳಿಸಲಾಯಿತು.</p>.<p>ಮಂಡಳಿಯ ನಿರ್ದೇಶಕ ಸುಬ್ರಾಯ ಹೆಗಡೆ ಗೌರಿಬಣ್ಣಿಗೆ ಇದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಶಂಕರ ಭಟ್ಟ ಉಂಚಳ್ಳಿ, ವೇದಾ ಹೆಗಡೆ ನೀರ್ನಳ್ಳಿ, ನಾಗರಾಜ ಜೋಶಿ, ಆರ್.ಎನ್.ಭಟ್ಟ ಸುಗಾವಿ ಸಹಕರಿಸಿದರು.<br /><br /><br /><br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ‘ಉತ್ತಮ ವಿಚಾರಧಾರೆ, ಸಕಾರಾತ್ಮಕ ಚಿಂತನೆಗಳ ಜತೆಗೆ ಧರ್ಮ ಹಾಗೂ ಪರಂಪರೆಯನ್ನು ಯುವಪೀಳಿಗೆಗೆ ರೂಢಿಸಬೇಕು. ಆ ಮೂಲಕ ಸದ್ಭಾವನೆಯ ಸಮಾಜ ನಿರ್ಮಾಣಗೊಳ್ಳಲಿ’ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.</p>.<p>31ನೇ ಚಾತುರ್ಮಾಸ ವೃತ ಆರಂಭಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ‘ಶಿಕ್ಷಣದ ನೆಪದಲ್ಲಿ ಮಕ್ಕಳನ್ನು ಸಂಸ್ಕಾರದಿಂದ ದೂರ ಮಾಡುವ ಕೆಲಸ ಪಾಲಕರಿಂದ ಆಗಬಾರದು’ ಎಂದು ಹೇಳಿದರು.</p>.<p>‘ಹಳ್ಳಿಯ ವಾತಾವರಣದಲ್ಲಿ ಸಾಮೂಹಿಕವಾಗಿ ಹಬ್ಬಗಳ ಆಚರಣೆ ಬಹಳ ಕಡಿಮೆಯಾಗಿದೆ. ಇದರಿಂದ ಮನುಷ್ಯನ ಮನಸ್ಸು ವಿಕೃತವಾಗುತ್ತಿದೆ. ಸಾಮೂಹಿಕ ಹಬ್ಬಗಳ ಆಚರಣೆಯಿಂದ ಐಕ್ಯಭಾವ ಮೂಡುತ್ತದೆ’ ಎಂದರು.</p>.<p>ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ, ‘ಧರ್ಮದ ಉಳಿವಿಗೆ ಋಷಿಮುನಿಗಳು, ಸಂತರ ಅನುಷ್ಠಾನ ಬಲ ಕಾರಣ’ ಎಂದರು.</p>.<p>ವಿಶ್ವೇಶ್ವರ ಭಟ್ಟ ಕೆರೆಕೈ ಅವರಿಗೆ ‘ಪುರೋಹಿತ ಶಿರೋಮಣಿ’, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್.ಹೆಗಡೆ ಭೈರುಂಬೆ ಅವರಿಗೆ ‘ಸಾಧಕ ಶಿರೋಮಣಿ’ ಬಿರುದು ನೀಡಿ ಸನ್ಮಾನಿಸಲಾಯಿತು.ರಾಮಾನುಭವ ಸಪ್ತಾಹ ತಾಳಮದ್ದಲೆ ಧ್ವನಿಮುದ್ರಿಕೆ ಬಿಡುಗಡೆಗೊಳಿಸಲಾಯಿತು.</p>.<p>ಮಂಡಳಿಯ ನಿರ್ದೇಶಕ ಸುಬ್ರಾಯ ಹೆಗಡೆ ಗೌರಿಬಣ್ಣಿಗೆ ಇದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಶಂಕರ ಭಟ್ಟ ಉಂಚಳ್ಳಿ, ವೇದಾ ಹೆಗಡೆ ನೀರ್ನಳ್ಳಿ, ನಾಗರಾಜ ಜೋಶಿ, ಆರ್.ಎನ್.ಭಟ್ಟ ಸುಗಾವಿ ಸಹಕರಿಸಿದರು.<br /><br /><br /><br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>