ತಳ್ಳುಗಾಡಿಗೆ ಆಂಬುಲೆನ್ಸ್ ಎಂದು ಫಲಕ ಹಚ್ಚಿ, ಸೈರನ್ ಅಳವಡಿಸಲಾಗಿತ್ತು. ಅದರ ಮೇಲೆ ರೋಗಿಯ ವೇಷಧಾರಿ ಮಲಗಿದ್ದರು. ಜಿಲ್ಲಾ ಆಸ್ಪತ್ರೆ ಆವರಣದಿಂದ ಆ ತಳ್ಳುಗಾಡಿಯ ಜೊತೆ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನಗರದ ಪಿಕಳೆ ರಸ್ತೆ, ಸವಿತಾ ವೃತ್ತ, ಗ್ರೀನ್ ಸ್ಟ್ರೀಟ್ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ನಂತರ ಉಪವಿಭಾಗಾಧಿಕಾರಿ ಅಭಿಜಿನ್ ಅವರಿಗೆ ಮನವಿ ಸಲ್ಲಿಸಿದರು.