ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಮಾಜಾಳಿಯ ಕೃಷಿಕ ರಮೇಶ ಕದಮ್, ಕೈಗಾ ಅಣುವಿದ್ಯುತ್ ಕೇಂದ್ರದ ಸಿಬ್ಬಂದಿ ಪರೇಶ ನಾಯ್ಕ ಹಾಗೂ ಅಶೋಕ ಭಜಂತ್ರಿ ಅದನ್ನು ಗಮನಿಸಿದರು. ಬಳಿಕ ಕಾಡುಪಾಪವನ್ನು ಜತನದಿಂದ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದರು. ಕುಂಬಾರವಾಡದ ಅರಣ್ಯ ಇಲಾಖೆ ಕಚೇರಿಯಲ್ಲಿ ಅದನ್ನು ಉಪಚರಿಸಿ ಮರಳಿ ಕಾಡಿಗೆ ಬಿಡಲಾಯಿತು.