ಜೊಯಿಡಾ:‘ತಾಲ್ಲೂಕಿನ ಕಾಳಿ ನದಿಯ ನೀರನ್ನು ಉತ್ತರ ಕರ್ನಾಟಕದ ನದಿಗಳಿಗೆ ಹರಿಸುವ ಪ್ರಸ್ತಾವಕ್ಕೆ ನಮ್ಮ ವಿರೋಧವಿದೆ. ನಮ್ಮ ಕುಡಿಯುವ ನೀರಿನ ಯೋಜನೆಗೆ, ಕೃಷಿಗೆ ನೀರುಣಿಸುವ ಯೋಜನೆಗೆ ಅವಕಾಶ ನೀಡಬೇಕು. ಅದುಬಿಟ್ಟು ಬೇರೆ ಜಿಲ್ಲೆಗಳಿಗೆ ಸಾಗಿಸುವ ಪ್ರಯತ್ನದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಹೆಗಡೆಎಚ್ಚರಿಕೆ ನೀಡಿದ್ದಾರೆ.