ರೈತರಿಗೆ ಸಲಹೆ ನೀಡಿದ ವಿ.ಎಂ. ಹೆಗಡೆ ಅವರು, ‘ಕಳೆದ ವರ್ಷ ಕೊಳೆ ರೋಗ ಬಂದ ತೋಟಗಳಲ್ಲಿ ರೋಗಾಣು ಸುಪ್ತಾವಸ್ಥೆಯಲ್ಲಿದೆ. ಈಗ ಪೂರಕ ವಾತಾವರಣವಿರುವುದರಿಂದ ಒಮ್ಮೆಲೇ ತೀವ್ರವಾಗಿದೆ. ಇದು ಗಾಳಿಯ ಮುಖಾಂತರ ಹರಡುತ್ತ ಹೋಗುತ್ತದೆ. ಆದ್ದರಿಂದ ರೈತರು, ರೋಗ ಬಂದಿರುವ ತೋಟಗಳಲ್ಲಿ, ಮಳೆ ಬಿಡುವು ಕೊಟ್ಟಾಗ ಅಂತರವ್ಯಾಪಿ ಶಿಲೀಂದ್ರನಾಶಕವಾದ ಮೆಟಾಲಾಕ್ಷಿಲ್ 35 ಡಬ್ಲ್ಯೂಎಸ್ 1 ಗ್ರಾಂ ಅಥವಾ ಮೆಟಾಲಾಕ್ಷಿಲ್ ಎಂ.ಝಡ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ, ಗೊನೆಗೆ ಮತ್ತು ಎಲೆಗಳಿಗೆ ಸಿಂಪಡಿಸಬೇಕು. ಇದರಿಂದ ಮುಂದೆ ಚಂಡೆ ಕೊಳೆ ರೋಗ ಬಾರದಂತೆ ತಡೆಗಟ್ಟಬಹುದು. ನಂತರ ಒಂದು ವಾರದೊಳಗೆ ಶೇ1ರ ಬೋರ್ಡೊ ದ್ರಾವಣ ಸಿಂಪಡಿಸಬೇಕು’ ಎಂದರು.
ರೈತರಾದ ಕಮಲಾಕರ ಹೆಗಡೆ, ವಿಶ್ವನಾಥ ಹೆಗಡೆ, ಪ್ರಶಾಂತ ಹೆಗಡೆ, ಶ್ರೀಧರ ಹೆಗಡೆ, ಸುಬ್ರಮಣ್ಯ ಹೆಗಡೆ, ಕೃಷ್ಣ ಹೆಗಡೆ ಹಾಜರಿದ್ದರು.