ಶಿರಸಿ: ಕಸಾಯಿಖಾನೆಗೆ ಸಾಗಿಸುತ್ತಿದ್ದರೆನ್ನಲಾದ 13 ಕೋಣಗಳನ್ನು ತಾಲ್ಲೂಕಿನ ಬನವಾಸಿ ಠಾಣೆಯ ಪೊಲೀಸರು ಶನಿವಾರ ರಕ್ಷಿಸಿದ್ದಾರೆ.
ಈ ಸಂಬಂಧ ಆರೋಪಿಗಳಾದ ಬೆಂಗಳೂರಿನ ವೆಂಕಟೇಶ ಮುನಿಯಪ್ಪ, ಚಿಕ್ಕಬಳ್ಳಾಪುರದ ಅಹ್ಮದ್ ಅಜೀಮ್ ಸಾಬ್, ಆಂಧ್ರಪ್ರದೇಶದ ಬಶೀರ್ ಫರ್ಕುದ್ದೀನ್ ಸಾಬ್, ವಲಿ ಶೇಖ್ ಎಂಬುವವರನ್ನು ಬಂಧಿಸಿದ್ದಾರೆ.
ಮುಂಬೈನಿಂದ ಭಟ್ಕಳಕ್ಕೆ ಈ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ, ದಾಸನಕೊಪ್ಪ ಚೆಕ್ಪೋಸ್ಟ್ನಲ್ಲಿ ಸಾಗಾಟಕ್ಕೆ ಬಳಸಿದ್ದ ಲಾರಿಯ ತಪಾಸಣೆ ನಡೆಸುವ ವೇಳೆ ಈ ಸಂಗತಿ ಗೊತ್ತಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.