ಆಪರೇಷನ್ ಕಮಲದ ಪಿತಾಮಹ ಯಡಿಯೂರಪ್ಪ. ಅಧಿಕಾರಕ್ಕಾಗಿ ಅವರು ಶಾಸಕರನ್ನು ಖರೀದಿಸಿದ್ದಾರೆ. ಹೆಬ್ಬಾರ್ ಸುಖಾಸುಮ್ಮನೆ ಬಿಜೆಪಿಗೆ ಹೋಗಿಲ್ಲ. ಪ್ರವಾಹ ಬಂದು ಕಷ್ಟದಲ್ಲಿದ್ದಾಗ ಹೆಬ್ಬಾರ್ ಬರಲಿಲ್ಲ, ಯಡಿಯೂರಪ್ಪ ಕೂಡ ಬರಲಿಲ್ಲ. ಬೆಳೆ ಪರಿಹಾರ, ಮನೆಗೆ ಪರಿಹಾರ ಹಣ ಕೊಟ್ಟಿಲ್ಲ. ದಲಿತರು, ಹಿಂದುಳಿದವರ ಸಮಸ್ಯೆಗೆ ಪರಿಹಾರ ಕಲ್ಪಿಸದೇ, ಈಗ ಉಪಚುನಾವಣೆ ನಡೆಸುವ ಸಂದರ್ಭ ಸೃಷ್ಟಿಸಿ ಮತ ಕೇಳಲು ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.