ಸಮುದ್ರದಲ್ಲಿ ಸ್ನಾನ:ಸೂರ್ಯಗ್ರಹಣದ ಬಳಿಕ ನಗರದ ಹಲವರು ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮುದ್ರದಲ್ಲಿ ಸ್ನಾನ ಮಾಡಿದರು. ಸಮುದ್ರ ತಟದಲ್ಲೇ ಜಪ, ತಪ ಮಾಡುತ್ತಿದ್ದುದೂ ಕಂಡುಬಂತು. ಹಲವರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬಾರದೇ ಉಪವಾಸ ಪಾಲನೆ ಮಾಡಿದರು. ಗ್ರಹಣ ಮುಕ್ತಾಯವಾದ ಬಳಿಕ ಮನೆಯ ಆವರಣವನ್ನು ತೊಳೆದು, ಸ್ನಾನ ಮಾಡಿದ ಬಳಿಕ ಊಟ, ಫಲಾಹಾರ ಸೇವಿಸಿದರು.