9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಎರಡು ದಿನಗಳಿಂದ ನಾಪತ್ತೆಯಾಗಿದ್ದ. ಶಾಲೆಯ ಮೈದಾನದಲ್ಲಿರುವ ಬಾವಿಯಲ್ಲಿ ಮಂಗಳವಾರ ಬಾಲಕನ ಶವ ದೊರೆತಿದೆ. ರಾಮನಬೈಲಿನಲ್ಲಿರುವ ಪೋಷಕರ ಮನೆಯಲ್ಲಿ ಉಳಿದಿದ್ದ ಈತನಿಗೆ ಮೊಬೈಲ್ ಹೆಚ್ಚು ಬಳಸದಂತೆ ಬುದ್ಧಿವಾದ ಹೇಳಿದ್ದರಿಂದ ಈತ ನೊಂದಿದ್ದ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.