‘ದೂರದ ದಾರಿಯಲ್ಲಿ ಒಂದು ಸೇತುವೆಯಿದೆ. ಅದೇ ರೀತಿ ಶಾಲೆಯ ಸಮೀಪದಲ್ಲೇ ಒಂದು ಕಾಲುಸಂಕ ನಿರ್ಮಿಸಿದರೆ ಮಕ್ಕಳಿಗೆ ತುಂಬ ಅನುಕೂಲವಾಗುತ್ತದೆ. ಗ್ರಾಮದಲ್ಲಿ ಇರುವವರೆಲ್ಲ ಬಡವರು. ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಮತ್ತು ಪುನಃ ಮನೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ. ಮಳೆ ಬೀಳುವಾಗ ಬೇಸಾಯ ಮಾಡಬೇಕು. ಆದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೇ ಇಡೀ ದಿನ ವ್ಯರ್ಥವಾಗುತ್ತಿದೆ’ ಎಂದು ಪಾಲಕ ಕೃಷ್ಣಾನಂದ ನಾಯ್ಕ ಬೇಸರ ವ್ಯಕ್ತಪಡಿಸಿದರು.