<p><strong>ಕಾರವಾರ: </strong>ಆ ಹಳ್ಳದ ಒಂದು ಭಾಗದಲ್ಲಿ ಶಾಲೆ, ಮತ್ತೊಂದು ಕಡೆ ಮನೆಗಳು. ಹಳ್ಳದಲ್ಲಿ ನೀರು ಜೋರಾಗಿ ಹರಿದರೆ ಪುಟ್ಟ ಪುಟ್ಟ ಮಕ್ಕಳನ್ನು ಪಾಲಕರು ದೂರದ ದಾರಿಯಿಂದ ಶಾಲೆಗೆ ಕರೆದುಕೊಂಡು ಬರಬೇಕಾದ ಅನಿವಾರ್ಯತೆ. ಈ ಕೆಲಸಕ್ಕಾಗಿ ಇಡೀ ದಿನ ಮೀಸಲಿಡಬೇಕಾದ ಬೇಸರ.</p>.<p>ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಕೋವೆಯ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳು ಬರಲು ಇಲ್ಲಿನ ಹಳ್ಳ ತಡೆಯಾಗಿದೆ. ಸುಮಾರು 50 ಮೀಟರ್ ಅಗಲದ ಈ ಹಳ್ಳದಲ್ಲಿ ಬೆಟ್ಟದ ಮೇಲಿನ ನೀರು ರಭಸವಾಗಿ ಹರಿಯುತ್ತದೆ. ಮಳೆಗಾಲಪೂರ್ತಿ ಮೈದುಂಬಿರುತ್ತದೆ. ಹೀಗಾಗಿ ಸಮೀಪದಲ್ಲೇ ಮನೆ ಹಾಗೂ ಶಾಲೆಯಿದ್ದರೂ ಮಕ್ಕಳು ಸುಮಾರು ಮೂರು ಕಿಲೋಮೀಟರ್ಸುತ್ತಿಬಳಸಿ ಬರಬೇಕಾಗಿದೆ.</p>.<p>‘ದೂರದ ದಾರಿಯಲ್ಲಿ ಒಂದು ಸೇತುವೆಯಿದೆ. ಅದೇ ರೀತಿ ಶಾಲೆಯ ಸಮೀಪದಲ್ಲೇ ಒಂದು ಕಾಲುಸಂಕ ನಿರ್ಮಿಸಿದರೆ ಮಕ್ಕಳಿಗೆ ತುಂಬ ಅನುಕೂಲವಾಗುತ್ತದೆ. ಗ್ರಾಮದಲ್ಲಿ ಇರುವವರೆಲ್ಲ ಬಡವರು. ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಮತ್ತು ಪುನಃ ಮನೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ. ಮಳೆ ಬೀಳುವಾಗ ಬೇಸಾಯ ಮಾಡಬೇಕು. ಆದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೇ ಇಡೀ ದಿನ ವ್ಯರ್ಥವಾಗುತ್ತಿದೆ’ ಎಂದು ಪಾಲಕ ಕೃಷ್ಣಾನಂದ ನಾಯ್ಕ ಬೇಸರ ವ್ಯಕ್ತಪಡಿಸಿದರು.</p>.<p>‘ಈ ದಾರಿಯಲ್ಲಿ ಸುಮಾರು 10 ಮನೆಗಳಿವೆ. ಅಲ್ಲಿನ ಮಕ್ಕಳೆಲ್ಲರೂ ಇದೇ ಶಾಲೆಗೆ ಬರುತ್ತಾರೆ. ಅವರಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆಮೂಲ ಸೌಕರ್ಯ ಒದಗಿಸಬೇಕಾದುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜವಾಬ್ದಾರಿಯಲ್ಲವೇ? ದಯವಿಟ್ಟು ಈ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಮನವಿ ಮಾಡಿದರು.</p>.<p class="Subhead"><strong>‘ಜಮೀನು ಸಮಸ್ಯೆಯಿಲ್ಲ’:</strong>‘ಕಾಲುಸಂಕ ನಿರ್ಮಾಣ ಮಾಡಲು ಜಾಗ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ಮತ್ತೊಂದು ಬದಿಯಲ್ಲಿ ಇರುವ ಜಮೀನು ಮಾಲೀಕರನ್ನೂ ಮನ ಒಲಿಸಬಹುದು. ಜಾಗದ ಕೊರತೆಯ ಸಮಸ್ಯೆಯೇ ಇಲ್ಲ. ಹೆಚ್ಚು ವೆಚ್ಚದಾಯಕ ಕಾಮಗಾರಿಯೂ ಬೇಕಾಗಿಲ್ಲ. ಆದ್ದರಿಂದತಾಲ್ಲೂಕು ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು’ ಎಂಬುದು ಕೃಷ್ಣಾನಂದ ನಾಯ್ಕ ಅವರ ಒತ್ತಾಯವಾಗಿದೆ.</p>.<p>ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೋಭಾ ಗೌಡ ಮಾತನಾಡಿ, ‘1977ರಲ್ಲಿ ಸ್ಥಾಪನೆಯಾದ ಈ ಶಾಲೆ ಸುಂದರವಾದ ಪರಿಸರದಲ್ಲಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ 45 ವಿದ್ಯಾರ್ಥಿಗಳಿದ್ದಾರೆ.ಹಳ್ಳದ ಮತ್ತೊಂದು ಬದಿಯಲ್ಲಿ ಕೃಷಿಕರೇ ಅಧಿಕವಿದ್ದಾರೆ. ಇಲ್ಲಿ ಕಾಲುಸಂಕ ನಿರ್ಮಾಣವಾದರೆ ಊರಿನ ಜನರಿಗೂ ಅನುಕೂಲವಾಗುತ್ತದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಆ ಹಳ್ಳದ ಒಂದು ಭಾಗದಲ್ಲಿ ಶಾಲೆ, ಮತ್ತೊಂದು ಕಡೆ ಮನೆಗಳು. ಹಳ್ಳದಲ್ಲಿ ನೀರು ಜೋರಾಗಿ ಹರಿದರೆ ಪುಟ್ಟ ಪುಟ್ಟ ಮಕ್ಕಳನ್ನು ಪಾಲಕರು ದೂರದ ದಾರಿಯಿಂದ ಶಾಲೆಗೆ ಕರೆದುಕೊಂಡು ಬರಬೇಕಾದ ಅನಿವಾರ್ಯತೆ. ಈ ಕೆಲಸಕ್ಕಾಗಿ ಇಡೀ ದಿನ ಮೀಸಲಿಡಬೇಕಾದ ಬೇಸರ.</p>.<p>ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಕೋವೆಯ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳು ಬರಲು ಇಲ್ಲಿನ ಹಳ್ಳ ತಡೆಯಾಗಿದೆ. ಸುಮಾರು 50 ಮೀಟರ್ ಅಗಲದ ಈ ಹಳ್ಳದಲ್ಲಿ ಬೆಟ್ಟದ ಮೇಲಿನ ನೀರು ರಭಸವಾಗಿ ಹರಿಯುತ್ತದೆ. ಮಳೆಗಾಲಪೂರ್ತಿ ಮೈದುಂಬಿರುತ್ತದೆ. ಹೀಗಾಗಿ ಸಮೀಪದಲ್ಲೇ ಮನೆ ಹಾಗೂ ಶಾಲೆಯಿದ್ದರೂ ಮಕ್ಕಳು ಸುಮಾರು ಮೂರು ಕಿಲೋಮೀಟರ್ಸುತ್ತಿಬಳಸಿ ಬರಬೇಕಾಗಿದೆ.</p>.<p>‘ದೂರದ ದಾರಿಯಲ್ಲಿ ಒಂದು ಸೇತುವೆಯಿದೆ. ಅದೇ ರೀತಿ ಶಾಲೆಯ ಸಮೀಪದಲ್ಲೇ ಒಂದು ಕಾಲುಸಂಕ ನಿರ್ಮಿಸಿದರೆ ಮಕ್ಕಳಿಗೆ ತುಂಬ ಅನುಕೂಲವಾಗುತ್ತದೆ. ಗ್ರಾಮದಲ್ಲಿ ಇರುವವರೆಲ್ಲ ಬಡವರು. ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಮತ್ತು ಪುನಃ ಮನೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ. ಮಳೆ ಬೀಳುವಾಗ ಬೇಸಾಯ ಮಾಡಬೇಕು. ಆದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೇ ಇಡೀ ದಿನ ವ್ಯರ್ಥವಾಗುತ್ತಿದೆ’ ಎಂದು ಪಾಲಕ ಕೃಷ್ಣಾನಂದ ನಾಯ್ಕ ಬೇಸರ ವ್ಯಕ್ತಪಡಿಸಿದರು.</p>.<p>‘ಈ ದಾರಿಯಲ್ಲಿ ಸುಮಾರು 10 ಮನೆಗಳಿವೆ. ಅಲ್ಲಿನ ಮಕ್ಕಳೆಲ್ಲರೂ ಇದೇ ಶಾಲೆಗೆ ಬರುತ್ತಾರೆ. ಅವರಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆಮೂಲ ಸೌಕರ್ಯ ಒದಗಿಸಬೇಕಾದುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜವಾಬ್ದಾರಿಯಲ್ಲವೇ? ದಯವಿಟ್ಟು ಈ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಮನವಿ ಮಾಡಿದರು.</p>.<p class="Subhead"><strong>‘ಜಮೀನು ಸಮಸ್ಯೆಯಿಲ್ಲ’:</strong>‘ಕಾಲುಸಂಕ ನಿರ್ಮಾಣ ಮಾಡಲು ಜಾಗ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ಮತ್ತೊಂದು ಬದಿಯಲ್ಲಿ ಇರುವ ಜಮೀನು ಮಾಲೀಕರನ್ನೂ ಮನ ಒಲಿಸಬಹುದು. ಜಾಗದ ಕೊರತೆಯ ಸಮಸ್ಯೆಯೇ ಇಲ್ಲ. ಹೆಚ್ಚು ವೆಚ್ಚದಾಯಕ ಕಾಮಗಾರಿಯೂ ಬೇಕಾಗಿಲ್ಲ. ಆದ್ದರಿಂದತಾಲ್ಲೂಕು ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು’ ಎಂಬುದು ಕೃಷ್ಣಾನಂದ ನಾಯ್ಕ ಅವರ ಒತ್ತಾಯವಾಗಿದೆ.</p>.<p>ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೋಭಾ ಗೌಡ ಮಾತನಾಡಿ, ‘1977ರಲ್ಲಿ ಸ್ಥಾಪನೆಯಾದ ಈ ಶಾಲೆ ಸುಂದರವಾದ ಪರಿಸರದಲ್ಲಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ 45 ವಿದ್ಯಾರ್ಥಿಗಳಿದ್ದಾರೆ.ಹಳ್ಳದ ಮತ್ತೊಂದು ಬದಿಯಲ್ಲಿ ಕೃಷಿಕರೇ ಅಧಿಕವಿದ್ದಾರೆ. ಇಲ್ಲಿ ಕಾಲುಸಂಕ ನಿರ್ಮಾಣವಾದರೆ ಊರಿನ ಜನರಿಗೂ ಅನುಕೂಲವಾಗುತ್ತದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>