‘ಚವಡಳ್ಳಿ, ಮಲವಳ್ಳಿ ಊರಿನಲ್ಲಿಯೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ, ಬೆಳಿಗ್ಗೆ ಬರುವ ಬಸ್ ಅಲ್ಲಿಯೇ ಭರ್ತಿಯಾಗುತ್ತದೆ. ಬ್ಯಾನಳ್ಳಿ ಗ್ರಾಮಕ್ಕೆ ಲಾಕ್ಡೌನ್ಗಿಂತ ಮುಂಚೆ ಕೆಲವು ದಿನ ಬಸ್ ಬಿಡಲಾಗಿತ್ತು. ನಂತರ ಬರುತ್ತಿಲ್ಲ. ಹಾವೇರಿ ಡಿಪೊದಿಂದ ಹೆಚ್ಚುವರಿಯಾಗಿ ಒಂದು ಬಸ್ ತರಿಸಿ, ಬ್ಯಾನಳ್ಳಿ ಗ್ರಾಮಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಹೇಳಿದರು.