ಶಿರಸಿ: ನೆರೆ ಬಾಧಿತವಾಗಿದ್ದ ಸಿದ್ದಾಪುರ ತಾಲ್ಲೂಕಿನ ಅಣಲೇಬೈಲ್ ಗ್ರಾಮ ಪಂಚಾಯ್ತಿಯ ಹೊಸಪೇಟೆ ಬೈಲ್ನ ಜನರಿಗೆ ಕೆಪಿಸಿಸಿ ಶಿರಸಿ–ಸಿದ್ದಾಪುರ ಕ್ಷೇತ್ರದ ಉಸ್ತುವಾರಿ ಸುಷ್ಮಾ ರಾಜಗೋಪಾಲ್ ಅಗತ್ಯ ಸಾಮಗ್ರಿ ಒದಗಿಸಿ ನೆರವಾದರು.
ಈ ಭಾಗದಲ್ಲಿ ಹೆಚ್ಚಾಗಿ ಪರಿಶಿಷ್ಟ ಸಮುದಾಯದವರಿದ್ದು ನೆರೆಯಿಂದ ಮನೆ ಮುಳುಗಿದ್ದ ಪರಿಣಾಮ ಸಮೀಪದ ಕಾಳಜಿ ಕೇಂದ್ರದಲ್ಲಿ ವಾಸವಿದ್ದರು. ಅಲ್ಲಿಗೆ ಭೇಟಿ ನೀಡಿದ ಸುಷ್ಮಾ ರಾಜಗೋಪಾಲ ಸಂತ್ರಸ್ತರನ್ನು ಸಂತೈಸಿದರು. ಅವರಿಗೆ ಅಗತ್ಯವಿದ್ದ ಬ್ಲಾಂಕೆಟ್, ಚಾಪೆಗಳನ್ನು ನೀಡಿದರು.
ತಾಲ್ಲೂಕಿನ ರೇವಣಕಟ್ಟಾದ ನೆರೆಬಾಧಿತ ಪ್ರದೇಶಕ್ಕೂ ತೆರಳಿ ಅಲ್ಲಿನ ಸಂತ್ರಸ್ತರಿಗೆ ಅಕ್ಕಿ, ಹಾಸಿಗೆ ಹೊದಿಕೆ, ಚಾಪೆ ವಿತರಿಸಿದರು.