‘ಸರ್ಕಾರವು ಇನ್ನೂ ಸಮಿತಿಯ ಸದಸ್ಯರನ್ನು ನೇಮಿಸಿಲ್ಲ. ಅಲ್ಲದೇ ಹಸ್ತಾಂತರ ಪ್ರಕ್ರಿಯೆ ನಡೆಸುವಾಗ ನಮ್ಮ ಸಿಬ್ಬಂದಿ, ದೇವಸ್ಥಾನಕ್ಕೆ ಸಂಬಂಧ ಪಟ್ಟವರು, ಉಪಾಧಿವಂತರು, ಪೊಲೀಸರು ಸೇರಿದಂತೆ ಬಹಳ ಜನರ ಅವಶ್ಯಕತೆ ಇರುತ್ತದೆ. ಇದು ಕೋವಿಡ್ ನಿಯಮಾವಳಿ ಪಾಲನೆಗೂ ತೊಂದರೆ ಆಗಬಹುದು. ಹಾಗಾಗಿನಾಲ್ಕೈದು ದಿವಸದಲ್ಲಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.