ಟ್ರಸ್ಟ್ ಉಪಾಧ್ಯಕ್ಷ ಸಂಜಯ ಬಸವರಾಜ ಕಿತ್ತೂರ ಮಾತನಾಡಿ, ‘ಉತ್ಸವದ ಅಂಗವಾಗಿ ಫೆ.9ರಂದು ಮಧ್ಯಾಹ್ನ 12ಕ್ಕೆ ‘ಚನ್ನಬಸವ ಪ್ರಸಾದ’ ಮತ್ತು ‘ಶಿವಶರಣ ಶರಣೆಯರ ಪ್ರಸಾದ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಆ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ ಭಾಗವಹಿಸುವರು. ಬಿ.ಜೆ.ಪಿ.ಯ ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಯಡಿಯೂರಪ್ಪ, ಶಾಸಕರಾದ ಮಹಾಂತೇಶ ಕೌಜಲಗಿ ಮತ್ತು ಮಹಾಂತೇಶ ದೊಡಗೌಡ್ರು ಪಾಲ್ಗೊಳ್ಳುವರು’ ಎಂದು ಹೇಳಿದರು.