ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಭಾಗೀರಥಿ ಹೆಗಡೆ ಅವರ ‘ಬಾರೆಲೆ ಹಕ್ಕಿ’ ಪ್ರಬಂಧ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಮಧ್ಯಾಹ್ನ ನಡೆದ ಕಾವ್ಯ–ಕುಂಚ ಕಾರ್ಯಕ್ರಮದಲ್ಲಿ ಕಲಾವಿದರಾಗಿ ಖ್ಯಾತ ಚಿತ್ರಗಾರ ಜಿ.ಎಂ.ಹೆಗಡೆ ತಾರಗೋಡ ಭಾಗವಹಿಸಿದ್ದರು. ಕವಯತ್ರಿ ಎನ್.ಆರ್. ರೂಪಶ್ರಿ ಆಶಯ ಮಾತನಾಡಿದರು. ಕವಿಗಳಾದ ಜಯರಾಮ ಹೆಗಡೆ, ಶಶಿಕಲಾ ಭಟ್ಟ, ಡಾ. ಅಜಿತ್ ಹೆಗಡೆ, ಗಣೇಶ ಹೊಸ್ಮನಿ, ರತ್ನಾಕರ ನಾಯ್ಕ, ಜಿ.ವಿ.ಭಟ್ಟ ಕೊಪ್ಪಲತೋಟ, ದತ್ತಗುರು ಕಂಠಿ, ಗಾಯತ್ರಿ ರಾಘವೇಂದ್ರ, ಉಮೇಶ ನಾಯ್ಕ ಪಾಲ್ಗೊಂಡಿದ್ದರು. ‘ಸಾಹಿತ್ಯ ಓದುಗರು ಕಡಿಮೆಯಾಗುತ್ತಿದ್ದಾರೆ’ ಕುರಿತ ಸಾಹಿತ್ಯ ಪಟ್ಟಂಗದಲ್ಲಿ ನಿವೃತ್ತ ಪ್ರಾದ್ಯಾಪಕಿ ವಿಜಯನಳಿನಿ ರಮೇಶ, ಅಶೋಕ ಹಾಸ್ಯಗಾರ, ಕೆ.ಎನ್. ಹೊಸ್ಮನಿ, ಸುಬ್ರಾಯ ಮತ್ತಿಹಳ್ಳಿ, ಭವ್ಯಾ ಹಳೆಯೂರು, ಸಿಂಧುಚಂದ್ರ ಹೆಗಡೆ, ಮೂರ್ತಿ ಅಂಕೋಲೆಕರ್ ಭಾಗವಹಿಸಿದ್ದರು.