ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು- ಮುಂಬೈ ಬ್ರಾಡ್ಗೇಜ್ನ ಮುಖ್ಯ ಮಾರ್ಗಕ್ಕೆ ಶಿರಸಿ– ಹಾವೇರಿ ನಡುವೆ ಸಂಪರ್ಕ ಮಾರ್ಗ (connective route) ನಿರ್ಮಾಣವಾದರೆ, ವಾಣಿಜ್ಯ ವಹಿವಾಟಿನ ಕೇಂದ್ರವಾಗಿರುವ ಶಿರಸಿಯ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ ಒಂದೂವರೆ ವರ್ಷದ ಹಿಂದೆ ಅಭಿಯಾನ ನಡೆಸಲಾಗಿತ್ತು. ಆದರೆ, ಆ ವರ್ಷ ಕೇಂದ್ರ ಬಜೆಟ್ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಅನುದಾನ ದೊರೆತಿರಲಿಲ್ಲ. ಪ್ರಸ್ತುತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಮುಂಡಗೋಡ, ಶಿರಸಿ, ಸಿದ್ದಾಪುರ ಮಾರ್ಗವಾಗಿ ಹುಬ್ಬಳ್ಳಿ–ತಾಳಗುಪ್ಪ ಮಾರ್ಗದ ಸರ್ವೆಗೆ ₹ 79 ಲಕ್ಷ ಮಂಜೂರು ಮಾಡಿದ್ದಾರೆ’ ಎಂದರು.