ಶಿರಸಿ: ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಎಲ್ಲ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರರಾಜ್ಯದ ಸಿಬ್ಬಂದಿಯನ್ನು ತಕ್ಷಣ ವರ್ಗಾವಣೆ ಮಾಡಿ, ಆ ಜಾಗಕ್ಕೆ ಕನ್ನಡ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಅಥವಾ ನೇಮಿಸಬೇಕು ಎಂದು ‘ನಾವು ಕನ್ನಡಿಗರು‘ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಇಲ್ಲಿ ಮನವಿ ನೀಡಿದರು.
ಕರ್ನಾಟಕದ ಉದ್ಯೋಗ ಕನ್ನಡಿರ ಹಕ್ಕು ಚಳವಳಿಯ ಮುಂದುವರಿದ ಭಾಗವಾಗಿ, ಈ ಕಾರ್ಯಕ್ರಮ ನಡೆಸಿದ ಸಂಘಟನೆ ಕಾರ್ಯಕರ್ತರು, ಎಲ್ಲ ಬ್ಯಾಂಕ್ಗಳಿಗೆ ಭೇಟಿ ನೀಡಿದರು. ಸಂಘಟನೆ ಸ್ಥಳೀಯ ಪ್ರಮುಖರಾದ ಸಂದೇಶ ನಾಯ್ಕ, ಪ್ರಸನ್ನ ನಾಯ್ಕ, ಗಣೇಶ ಕಂಬಾರ್, ಮದನ್ ಇದ್ದರು.