ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ‘ಸಾವಿರಾರು ಜನ ಕ್ರಿಕೆಟ್ ಸ್ಟೇಡಿಯಂಗೆ ಬರುತ್ತಾರೆ. ಅವರ ವಾಹನಗಳನ್ನು ನಿಲ್ಲಿಸಲು ಎಲ್ಲಿ ವ್ಯವಸ್ಥೆ ಮಾಡುತ್ತಾರೆ? ಗ್ರಾಮಸ್ಥರಿಗೆ ಭದ್ರತೆ ಯಾರು ಕೊಡುತ್ತಾರೆ? ಕಾಮಗಾರಿಯ ಸಂದರ್ಭದಲ್ಲಿ ಕಲ್ಲು, ಬಂಡೆಗಳನ್ನು ತೆರವು ಮಾಡಲು ಸ್ಫೋಟಕಗಳನ್ನು ಬಳಸಿ, ಕಲ್ಲುಗಳು ಉರುಳಿ ಮನೆ ಮೇಲೆ ಬಿದ್ದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.