ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವನ್ನು ನ್ಯಾಯಾಲಯವು ಸರ್ಕಾರಕ್ಕೆ ನೀಡಿದೆ. ಮೀಸಲಾತಿ ವಿಚಾರದ ಕಾರಣಕ್ಕೆ ಈವರೆಗಿನ ಅಭಿವೃದ್ಧಿ ಕುಂಠಿತವಾಗಿದೆ. ಇನ್ನಾದರೂ, ಸರ್ಕಾರ ಮೀಸಲಾತಿ ಪಟ್ಟಿಯನ್ನು ಶೀಘ್ರ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಶ್ರೀಕಾಂತ ತಾರೀಬಾಗಿಲು, ದೀಪಾ ಮಹಾಲಿಂಗಣ್ಣನವರ್, ಸುಮಿತ್ರಾ ಗಾಂವಕರ ಇದ್ದರು.