‘ಕಾಲಿಗೆ ಗಾಯವಾಗಿ ಹುಳಗಳು ಬಿದ್ದಿದ್ದವು. ನೋವಿನಿಂದ ನರಳುತ್ತಿದ್ದ ಕುದುರೆಯನ್ನು ಸ್ನೇಹಿತರ ಜೊತೆಗೂಡಿ ಹುಬ್ಬಳ್ಳಿಯ ಪಿಪಲ್ ಫಾರ್ ಎನಿಮಲ್ಸ್ ಸಂಸ್ಥೆಗೆ ಬಿಟ್ಟು ಬರಲಾಗಿದೆ. ಅಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಲಾಗುತ್ತಿದೆ. ನೋವಿನಿಂದ ನರಳುತ್ತಿರುವ ಕುದುರೆಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು’ ಹಿಂದು ಸಂಘಟನೆಯ ಮುಖಂಡ ಅಯ್ಯಪ್ಪ ಭಜಂತ್ರಿ ಹೇಳಿದರು.