ಕುಮಟಾ ವಲಯ ಅರಣ್ಯ ಅಧಿಕಾರಿ ಪ್ರವೀಣ ನಾಯಕ ಪ್ರತಿಕ್ರಿಯಿಸಿ, ‘ಕಾಡು ಹಂದಿಯನ್ನು ಹತ್ಯೆ ಮಾಡುವುದು ವನ್ಯಜೀವಿ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಕಾಡು ಹಂದಿ ಬೆಳೆ ನಾಶ ಮಾಡಿದರೆ ರೈತರಿಗೆ ಪರಿಹಾರ (ಎಕ್ಸ್ಗ್ರೇಶಿಯಾ) ನೀಡುವ ಹೊಸ ಯೋಜನೆ ಜಾರಿಗೆ ಬಂದಿದೆ. ಈಗಾಗಲೇ ಕೆಲವು ರೈತರಿಗೆ ಪರಿಹಾರ ವಿತರಿಸಲಾಗಿದೆ’ ಎಂದರು.