‘ನನ್ನ ರಾಜಕೀಯ ಜೀವನದಲ್ಲಿ ಈವರೆಗೂ 15–20 ಪ್ರಕರಣಗಳು ದಾಖಲಾಗಿವೆ.ಎಲ್ಲವನ್ನೂ ನಾನು ಜಯಿಸಿದ್ದೇನೆ. ನನಗೂ ಕಾನೂನಿನ ಅರಿವಿದೆ. ಸಂವಿಧಾನ ಬದ್ಧವಾದ ಕಾನೂನಿಗೆ ಪ್ರತಿಯೊಬ್ಬರೂತಲೆ ಬಾಗಲೇಬೇಕು. ಯಾವುದೇ ಜಾತಿಯ ಮೇಲೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ. ಆದರೆ, ಹಳಿಯಾಳದಲ್ಲಿ ಕೆಲವರು ಮಧ್ಯವರ್ತಿ ಏಜೆಂಟರು ಅನ್ಯಜಾತಿ ಮತ್ತು ಕೋಮಿನಯುವಕ, ಯುವತಿಯರಮದುವೆ ಮಾಡಿಸುತ್ತಿದ್ದಾರೆ.ಇದರಿಂದ ವೈಷಮ್ಯಗಳು ಉಂಟಾಗುತ್ತಿವೆ. ಇದರ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಬೇಕು. ನಾನೂ ಇದಕ್ಕೆ ಸಿದ್ಧನಿದ್ದೇನೆ. ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ’ಎಂದು ಹೇಳಿದರು.