ಇದೇ ವೇಳೆ ದಿವಂಗತ ನೆಬ್ಬೂರು ನಾರಾಯಣ ಭಾಗವತರ ಸಾಕ್ಷ್ಯಚಿತ್ರ, ಜಿ.ಎಂ.ಭಟ್ ಕೆವಿ ಅವರ ‘ಪಂಚಧ್ರುಮ’ ಹಾಗೂ ಇಟಗಿ ಮಹಾಬಲೇಶ್ವರ ಭಟ್ಟರ ‘ಇಟಗಿಯವರ ಯಕ್ಷಗಾನ ಪ್ರಸಂಗಗಳು’ ಕೃತಿ ಬಿಡುಗಡೆಗೊಳಿಸಲಾಯಿತು. ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಇದ್ದರು.