ನಡುಗಡ್ಡೆಗೆ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಮಾತ್ರ ದೋಣಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಸಿಂಗರಿಸಿದ್ದ ಮೀನುಗಾರಿಕಾ ದೋಣಿಗಳಲ್ಲಿ ಭಕ್ತರನ್ನು ಕರೆದುಕೊಂಡು ಹೋಗಲಾಯಿತು. ಈ ಬಾರಿ ಕೊರೊನಾ ಮತ್ತು ಎರಡು ವರ್ಷಗಳ ಹಿಂದಿನ ದೋಣಿ ದುರಂತದ ಕರಾಳ ನೆನಪಿನಿಂದಾಗಿ ಅನೇಕ ಭಕ್ತರು ಜಾತ್ರೆಗೆ ಹಾಜರಾಗಲಿಲ್ಲ. ಅಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಗೋವಾದಿಂದಲೂ ಜನ ಬರಲಿಲ್ಲ. ಹಾಗಾಗಿ ಉತ್ಸವದ ಸಂದರ್ಭದಲ್ಲಿ ಗಿಜಿಗುಡುವ ನಡುಗಡ್ಡೆಯಲ್ಲಿ ಹೆಚ್ಚಿನ ಗೌಜು, ಗದ್ದಲಗಳು ಇರಲಿಲ್ಲ.