ರಾಜ್ಯದಲ್ಲಿ 62 ಲಕ್ಷ ಕುಟುಂಬಗಳುಬಡತನ ರೇಖೆಗಿಂತ ಕೆಳಗಿವೆ ಎಂದು ಕೇಂದ್ರ ಸರ್ಕಾರ ಲೆಕ್ಕಾಚಾರ ಹಾಕಿದೆ. ಅದರಂತೆ ಆ ಕುಟುಂಬಗಳಿಗೆ ತನ್ನ‘ಆಯುಷ್ಮಾನ್ ಭಾರತ’ ಯೋಜನೆಯ ಲಾಭ ನೀಡುವುದಾಗಿ ತಿಳಿಸಿದೆ. ಆದರೆ, ರಾಜ್ಯ ಸರ್ಕಾರದ ಪ್ರಕಾರ ಅಂದಾಜು 1.20 ಕೋಟಿ ಕುಟುಂಬಗಳಿವೆ. ಕೇಂದ್ರ ಸರ್ಕಾರದ ಯೋಜನೆಯಿಂದ ಹೊರಗುಳಿಯುವ ಬಡವರಿಗೆ ರಾಜ್ಯ ಸರ್ಕಾರ ನೆರವಾಗಲಿದೆ. ಇದರಿಂದ ಅರ್ಹರಿಗೆ ಪ್ರಯೋಜನವಾಗಲಿದೆ ಎಂದರು.