ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಮೊದಲು ರೈತರು ಕೃಷಿ ಉತ್ಪಾದನೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ (ಎ.ಪಿ.ಎಂ.ಸಿ) ಮೂಲಕವೇ ಮಾರಾಟ ಮಾಡಬೇಕಿತ್ತು. ಇದರಿಂದ ದಲ್ಲಾಳಿಗಳು ನಿಗದಿ ಮಾಡಿದ್ದೇ ಅಂತಿಮ ದರವಾಗುತ್ತಿತ್ತು. ಆದರೆ, ಈ ಕಾಯ್ದೆಯ ತಿದ್ದುಪಡಿಯ ಬಳಿಕ ರೈತರು ಯಾವ ರಾಜ್ಯದಲ್ಲಿ ಬೇಕಾದರೂ ತಮಗೆ ಬೇಕಾದವರಿಗೆ ಮಾರಾಟ ಮಾಡಬಹುದು. ಎ.ಪಿ.ಎಂ.ಸಿ. ವ್ಯವಸ್ಥೆಯಲ್ಲೂ ವ್ಯವಹರಿಸಲು ಅವಕಾಶವಿದೆ’ ಎಂದು ತಿಳಿಸಿದರು.