<p><strong>ಕಾರವಾರ:</strong> ‘ಸಿದ್ದಾಂತಗಳ ಮೇಲೆ, ನಾಯಕರ ಮೇಲೆ, ಪಕ್ಷಗಳ ಮೇಲಿನ ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ. ಯಾರನ್ನೋ ದ್ವೇಷಿಸುವುದು ಪ್ರೀತಿ ಅಲ್ಲ’ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.</p>.<p>ಇಲ್ಲಿನ ರಬಿಯಾ ಪ್ಲಾಜಾದಲ್ಲಿ ಭಾನುವಾರ ಪ್ರೀತಿಪದ ಸಂಸ್ಥೆಯು ವಿಠ್ಠಲ ಭಂಡಾರಿ ನೆನಪಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರೀತಿ:ಕಟ್ಟುವ ತತ್ವವಾಗಿ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.</p>.<p>‘ದೇಶಭಕ್ತಿಗೂ, ರಾಷ್ಟ್ರೀಯತೆಗೂ ವ್ಯತ್ಯಾಸವಿದೆ. ರಾಷ್ಟ್ರೀಯತೆ ಇನ್ನೊಬ್ಬರನ್ನು ದ್ವೇಷಿಸುವ ಗುಣ ಹುಟ್ಟಿಸುತ್ತದೆ. ದೇಶಭಕ್ತಿ ತನ್ನ ದೇಶ ಪ್ರೀತಿಸುವಂತೆ ಮಾಡುತ್ತದೆ. ಪ್ರೀತಿ ವ್ಯಕ್ತ ಮಾಡಲು ದೇಶ, ಗಡಿಯ ಪರಿಧಿ ಇಲ್ಲ. ಪ್ಯಾಲೆಸ್ಟೀನ್, ಕ್ಯೂಬಾದಲ್ಲಿನ ಯುದ್ಧಕ್ಕೆ ಸಂತ್ರಸ್ತರಾದವರಿಗೆ ಈ ದೇಶದವರು ಮಿಡಿಯುತ್ತಾರೆ’ ಎಂದರು.</p>.<p>‘ಪ್ರೀತಿ ಎಂದರೆ ಅರ್ಹ ವಸ್ತುವಿನ ಹುಡುಕಾಟವಲ್ಲ. ಸಂವೇದನಾಶೀಲ ಗುಣ ಬೆಳೆಸಿಕೊಳ್ಳುವುದು, ದ್ವೇಷ ವಿರೋಧಿಸುವ ಧೈರ್ಯ ತೋರುವುದು ನಿಜವಾದ ಪ್ರೀತಿ. ಕೇಡನ್ನು ವಿರೋಧಿಸದೆ ಪ್ರೀತಿ ಮಾಡಲಾಗದು. ನಮ್ಮೊಳಗಿನ ಚೈತನ್ಯವೇ ದೇವರು. ಅದನ್ನು ಪ್ರೀತಿಸುವ ತತ್ವ ಅಳವಡಿಸಿಕೊಳ್ಳಬೇಕು’ ಎಂದರು.</p>.<p>‘ಸಮಾನಸ್ಕಂದರಾಗಿ ಪ್ರೀತಿ ಹಂಚಿಕೊಳ್ಳಬೇಕು. ತ್ಯಾಗವೇ ಪ್ರೀತಿಯ ದೊಡ್ಡ ಅಂಶ. ಪ್ರೀತಿ ಎಂದರೆ ದಾನವಾಗಬಾರದು. ಅನುಭವಿಸುವುದು ಪ್ರೀತಿಯಲ್ಲ. ಭಾರತದಲ್ಲಿ ಪ್ರೀತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.</p>.<p>ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ‘ಶಾಖಭರಿತ ಭೂಮಿಯ ಮೇಲೆ ಮನುಷ್ಯ ಅರಗಿನ ಕಂಬದಂತೆ ನಿಂತಿದ್ದಾನೆ. ಆತನ ತಲೆಯ ಮೇಲಿನ ಸಂಸ್ಕೃತಿ ಹಾರಿಹೋಗಿದೆ’ ಎಂದರು.</p>.<p>ಸಾಹಿತಿ ವಿನಯಾ ಒಕ್ಕುಂದ ಹಾಗೂ ಶಿಕ್ಷಣ ತಜ್ಞ ಎಫ್.ಸಿ.ಚೇಗಾರೆಡ್ಡಿ ಅವರಿಗೆ ಪ್ರೀತಿಪದ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಯಮುನಾ ಗಾಂವ್ಕರ ಅವರು ಬರೆದ ‘ಕಣ್ಮುಚ್ಚಿದ ಗುಬ್ಬಚ್ಚಿ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ಸಾಮಾಜಿಕ ಹೋರಾಟಗಾರ ಎಂ.ಎಸ್.ಮೀನಾಕ್ಷಿ ಸುಂದರಂ, ಸಾಹಿತಿಗಳಾದ ಶಾಂತಾರಾಮ ನಾಯಕ ಹಿಚಕಡ, ರೋಹಿದಾಸ ನಾಯ್ಕ, ಎನ್.ಜಿ.ನಾಯ್ಕ ಪಾಲ್ಗೊಂಡಿದ್ದರು.</p>.<div><blockquote>ಉತ್ತರ ಕನ್ನಡ ಪ್ರಾಕೃತಿಕವಾಗಿ ಜಗತ್ತಿನಲ್ಲಿ ಸುಂದರ ಪ್ರದೇಶ. ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚು ಗಾಯಗೊಂಡ ಸ್ಥಳವೂ ಹೌದು</blockquote><span class="attribution"> ರಹಮತ್ ತರೀಕೆರೆ ಸಾಹಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ‘ಸಿದ್ದಾಂತಗಳ ಮೇಲೆ, ನಾಯಕರ ಮೇಲೆ, ಪಕ್ಷಗಳ ಮೇಲಿನ ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ. ಯಾರನ್ನೋ ದ್ವೇಷಿಸುವುದು ಪ್ರೀತಿ ಅಲ್ಲ’ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.</p>.<p>ಇಲ್ಲಿನ ರಬಿಯಾ ಪ್ಲಾಜಾದಲ್ಲಿ ಭಾನುವಾರ ಪ್ರೀತಿಪದ ಸಂಸ್ಥೆಯು ವಿಠ್ಠಲ ಭಂಡಾರಿ ನೆನಪಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರೀತಿ:ಕಟ್ಟುವ ತತ್ವವಾಗಿ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.</p>.<p>‘ದೇಶಭಕ್ತಿಗೂ, ರಾಷ್ಟ್ರೀಯತೆಗೂ ವ್ಯತ್ಯಾಸವಿದೆ. ರಾಷ್ಟ್ರೀಯತೆ ಇನ್ನೊಬ್ಬರನ್ನು ದ್ವೇಷಿಸುವ ಗುಣ ಹುಟ್ಟಿಸುತ್ತದೆ. ದೇಶಭಕ್ತಿ ತನ್ನ ದೇಶ ಪ್ರೀತಿಸುವಂತೆ ಮಾಡುತ್ತದೆ. ಪ್ರೀತಿ ವ್ಯಕ್ತ ಮಾಡಲು ದೇಶ, ಗಡಿಯ ಪರಿಧಿ ಇಲ್ಲ. ಪ್ಯಾಲೆಸ್ಟೀನ್, ಕ್ಯೂಬಾದಲ್ಲಿನ ಯುದ್ಧಕ್ಕೆ ಸಂತ್ರಸ್ತರಾದವರಿಗೆ ಈ ದೇಶದವರು ಮಿಡಿಯುತ್ತಾರೆ’ ಎಂದರು.</p>.<p>‘ಪ್ರೀತಿ ಎಂದರೆ ಅರ್ಹ ವಸ್ತುವಿನ ಹುಡುಕಾಟವಲ್ಲ. ಸಂವೇದನಾಶೀಲ ಗುಣ ಬೆಳೆಸಿಕೊಳ್ಳುವುದು, ದ್ವೇಷ ವಿರೋಧಿಸುವ ಧೈರ್ಯ ತೋರುವುದು ನಿಜವಾದ ಪ್ರೀತಿ. ಕೇಡನ್ನು ವಿರೋಧಿಸದೆ ಪ್ರೀತಿ ಮಾಡಲಾಗದು. ನಮ್ಮೊಳಗಿನ ಚೈತನ್ಯವೇ ದೇವರು. ಅದನ್ನು ಪ್ರೀತಿಸುವ ತತ್ವ ಅಳವಡಿಸಿಕೊಳ್ಳಬೇಕು’ ಎಂದರು.</p>.<p>‘ಸಮಾನಸ್ಕಂದರಾಗಿ ಪ್ರೀತಿ ಹಂಚಿಕೊಳ್ಳಬೇಕು. ತ್ಯಾಗವೇ ಪ್ರೀತಿಯ ದೊಡ್ಡ ಅಂಶ. ಪ್ರೀತಿ ಎಂದರೆ ದಾನವಾಗಬಾರದು. ಅನುಭವಿಸುವುದು ಪ್ರೀತಿಯಲ್ಲ. ಭಾರತದಲ್ಲಿ ಪ್ರೀತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದರು.</p>.<p>ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ‘ಶಾಖಭರಿತ ಭೂಮಿಯ ಮೇಲೆ ಮನುಷ್ಯ ಅರಗಿನ ಕಂಬದಂತೆ ನಿಂತಿದ್ದಾನೆ. ಆತನ ತಲೆಯ ಮೇಲಿನ ಸಂಸ್ಕೃತಿ ಹಾರಿಹೋಗಿದೆ’ ಎಂದರು.</p>.<p>ಸಾಹಿತಿ ವಿನಯಾ ಒಕ್ಕುಂದ ಹಾಗೂ ಶಿಕ್ಷಣ ತಜ್ಞ ಎಫ್.ಸಿ.ಚೇಗಾರೆಡ್ಡಿ ಅವರಿಗೆ ಪ್ರೀತಿಪದ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಯಮುನಾ ಗಾಂವ್ಕರ ಅವರು ಬರೆದ ‘ಕಣ್ಮುಚ್ಚಿದ ಗುಬ್ಬಚ್ಚಿ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ಸಾಮಾಜಿಕ ಹೋರಾಟಗಾರ ಎಂ.ಎಸ್.ಮೀನಾಕ್ಷಿ ಸುಂದರಂ, ಸಾಹಿತಿಗಳಾದ ಶಾಂತಾರಾಮ ನಾಯಕ ಹಿಚಕಡ, ರೋಹಿದಾಸ ನಾಯ್ಕ, ಎನ್.ಜಿ.ನಾಯ್ಕ ಪಾಲ್ಗೊಂಡಿದ್ದರು.</p>.<div><blockquote>ಉತ್ತರ ಕನ್ನಡ ಪ್ರಾಕೃತಿಕವಾಗಿ ಜಗತ್ತಿನಲ್ಲಿ ಸುಂದರ ಪ್ರದೇಶ. ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚು ಗಾಯಗೊಂಡ ಸ್ಥಳವೂ ಹೌದು</blockquote><span class="attribution"> ರಹಮತ್ ತರೀಕೆರೆ ಸಾಹಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>