‘ನಗರದಲ್ಲಿ ಇತ್ತೀಚಿಗೆ ಕಳವು ಹೆಚ್ಚಾಗಿದೆ. ಬೆಳ್ಳಂಬೆಳಿಗ್ಗೆ, ಜನರಿದ್ದರೂ ಹೆದರದೇ ದರೋಡೆ ನಡೆಸಲಾಗುತ್ತಿದೆ. ಇತ್ತೀಚಿಗೆ ‘ಶಿಲ್ಪ ವನ’ದ ಬಳಿ ನಿಲ್ಲಿಸಿದ್ದ ಮಹಾರಾಷ್ಟ್ರದ ಪ್ರವಾಸಿಗರ ಕಾರಿನ ಗಾಜು ಒಡೆದು ಹಣವನ್ನು ದೋಚಲಾಗಿತ್ತು. ಹೀಗಾಗಿ, ಎಲ್ಲ ಸರ್ಕಾರಿ ಕಚೇರಿಗಳಿಗೂ, ಪ್ರವಾಸಿ ಸ್ಥಳಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲೇಬೇಕಿರುವುದು ಇಂದಿನ ಅವಶ್ಯವಾಗಿದೆ’ ಎನ್ನುತ್ತಾರೆ ಸ್ಥಳೀಯ ರವೀಂದ್ರ ಬಾಡಕರ್.