ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಚಕ್ಕುಲಿ ಕಂಬಳವನ್ನು ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಇದ್ದರು. ಟಿಎಸ್ಎಸ್ ಸಿಬ್ಬಂದಿ ಸಹ ಚಕ್ಕುಲಿ ಕಂಬಳದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಚಕ್ಕುಲಿಯ ಜೊತೆಗೆ ಸಾಂಪ್ರದಾಯಿಕವಾದ ಬೆಣ್ಣೆ, ಕಾಯಿತುರಿ, ಬೆಲ್ಲ, ಹಾಗೂ ಪಲ್ಯವನ್ನು ನೀಡಲಾಯಿತು.