<p><strong>ಕಾರವಾರ:</strong> ಹಾಲಕ್ಕಿ ಸಮುದಾಯದವರು ಪ್ರತಿ ವರ್ಷ ಯುಗಾದಿ ದಿನದಂದು ಆಚರಿಸುತ್ತಿದ್ದ ವಿಶಿಷ್ಟ ‘ಹಗರಣ’ ಪ್ರದರ್ಶನಕ್ಕೆ ಈ ಬಾರಿಯೂ ಕೊರೊನಾ ಅಡ್ಡಿಯಾಗಿದೆ. ಹಿಂದಿನಿಂದಲೂ ಬಂದಿರುವ ಸಂಪ್ರದಾಯವನ್ನು ಏಕಾಏಕಿ ನಿಲ್ಲಿಸಲಾಗದು ಎಂದು ಕೆಲವೇ ಮಂದಿ ಹಗರಣ ಆಚರಣೆ ಮಾಡಿದರು.</p>.<p>ಅಂಕೋಲಾ ತಾಲ್ಲೂಕಿನ ಬಡಗೇರಿಯ ಸುತ್ತಮುತ್ತ ಹಗರಣವು ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತದೆ. ಕಳೆದ ವರ್ಷ ಯುಗಾದಿಯಂದು ಕೋವಿಡ್ ಕಾರಣದಿಂದ ಜನತಾಕರ್ಫ್ಯೂ ಮತ್ತು ನಿಷೇಧಾಜ್ಞೆ ವಿಧಿಸಲಾಗಿತ್ತು. ಹಾಗಾಗಿ ಯಾವುದೇ ಸಭೆ, ಸಮಾರಂಭಗಳ ಆಯೋಜನೆಗೆ ಅವಕಾಶ ಇರಲಿಲ್ಲ. ಈ ಬಾರಿ ಕೊರೊನಾದ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಕರಣಗಳು ಮತ್ತಷ್ಟು ಏರಿಕೆ ಕಾಣುತ್ತಿವೆ. ಹಾಗಾಗಿ ಸರ್ಕಾರದ ನಿಯಮಾವಳಿಯಂತೆ ಆಚರಣೆಗೆ ಸೀಮಿತ ಅವಕಾಶ ದೊರೆಯಿತು.</p>.<p>ಸಮಾಜದ ಆಗುಹೋಗುಗಳನ್ನು ವಿಡಂಬನಾತ್ಮಕವಾಗಿ ಪ್ರದರ್ಶಿಸುವ ಆಚರಣೆಯು ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಇದನ್ನು ನೋಡಲು ಸಾವಿರಾರು ಜನ ದೂರದ ಊರುಗಳಿಂದಲೂ ಬರುತ್ತಿದ್ದರು. ಮಂಗಳವಾರ ಬಡಗೇರಿಯಲ್ಲಿ ಪದ್ಧತಿಯಂತೆ ಮೂರು– ನಾಲ್ಕು ಮನರಂಜನಾ ಹಗರಣಗಳನ್ನು ಯುವಕರು ಪ್ರದರ್ಶಿಸಿದರು.</p>.<p>ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಬುಡಕಟ್ಟು ಜನರ ನೃತ್ಯ, ಪ್ರಧಾನಿ ನರೇಂದ್ರ ಮೋದಿ, ಮಠಾಧೀಶರು ಮುಂತಾದ ವಿಷಯಗಳಿಗೆ ಸಂಬಂಧಿಸಿದ ರೂಪಕಗಳನ್ನು ಆಯೋಜಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಹಾಲಕ್ಕಿ ಸಮುದಾಯದವರು ಪ್ರತಿ ವರ್ಷ ಯುಗಾದಿ ದಿನದಂದು ಆಚರಿಸುತ್ತಿದ್ದ ವಿಶಿಷ್ಟ ‘ಹಗರಣ’ ಪ್ರದರ್ಶನಕ್ಕೆ ಈ ಬಾರಿಯೂ ಕೊರೊನಾ ಅಡ್ಡಿಯಾಗಿದೆ. ಹಿಂದಿನಿಂದಲೂ ಬಂದಿರುವ ಸಂಪ್ರದಾಯವನ್ನು ಏಕಾಏಕಿ ನಿಲ್ಲಿಸಲಾಗದು ಎಂದು ಕೆಲವೇ ಮಂದಿ ಹಗರಣ ಆಚರಣೆ ಮಾಡಿದರು.</p>.<p>ಅಂಕೋಲಾ ತಾಲ್ಲೂಕಿನ ಬಡಗೇರಿಯ ಸುತ್ತಮುತ್ತ ಹಗರಣವು ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತದೆ. ಕಳೆದ ವರ್ಷ ಯುಗಾದಿಯಂದು ಕೋವಿಡ್ ಕಾರಣದಿಂದ ಜನತಾಕರ್ಫ್ಯೂ ಮತ್ತು ನಿಷೇಧಾಜ್ಞೆ ವಿಧಿಸಲಾಗಿತ್ತು. ಹಾಗಾಗಿ ಯಾವುದೇ ಸಭೆ, ಸಮಾರಂಭಗಳ ಆಯೋಜನೆಗೆ ಅವಕಾಶ ಇರಲಿಲ್ಲ. ಈ ಬಾರಿ ಕೊರೊನಾದ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಕರಣಗಳು ಮತ್ತಷ್ಟು ಏರಿಕೆ ಕಾಣುತ್ತಿವೆ. ಹಾಗಾಗಿ ಸರ್ಕಾರದ ನಿಯಮಾವಳಿಯಂತೆ ಆಚರಣೆಗೆ ಸೀಮಿತ ಅವಕಾಶ ದೊರೆಯಿತು.</p>.<p>ಸಮಾಜದ ಆಗುಹೋಗುಗಳನ್ನು ವಿಡಂಬನಾತ್ಮಕವಾಗಿ ಪ್ರದರ್ಶಿಸುವ ಆಚರಣೆಯು ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಇದನ್ನು ನೋಡಲು ಸಾವಿರಾರು ಜನ ದೂರದ ಊರುಗಳಿಂದಲೂ ಬರುತ್ತಿದ್ದರು. ಮಂಗಳವಾರ ಬಡಗೇರಿಯಲ್ಲಿ ಪದ್ಧತಿಯಂತೆ ಮೂರು– ನಾಲ್ಕು ಮನರಂಜನಾ ಹಗರಣಗಳನ್ನು ಯುವಕರು ಪ್ರದರ್ಶಿಸಿದರು.</p>.<p>ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಬುಡಕಟ್ಟು ಜನರ ನೃತ್ಯ, ಪ್ರಧಾನಿ ನರೇಂದ್ರ ಮೋದಿ, ಮಠಾಧೀಶರು ಮುಂತಾದ ವಿಷಯಗಳಿಗೆ ಸಂಬಂಧಿಸಿದ ರೂಪಕಗಳನ್ನು ಆಯೋಜಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>